ನಗರದ ಹೃದಯಭಾಗದಿಂದ ಸುಮಾರು 12 ಕಿ.ಮೀ ದೂರದಲ್ಲಿ ಈ ಗೌರಿಶಂಕರ ಕೊಳ ಇದೆ.ಇದನ್ನು ಸುಮಾರು ಇನ್ನೂರು ವರ್ಷಗಳ ಹಿಂದೆ ಕಟ್ಟಲಾಗಿತ್ತು. ಇಲ್ಲಿ ಮೂರು ದೇವಾಲಯಗಳಿದ್ದು ಎಲ್ಲವೂ ಮಾತ್ರೆ ದುರ್ಗೆಗೆ ಅರ್ಪಿತವಾಗಿವೆ. ಇದನ್ನು ಅಸ್ಸಾಂ ನ ರಾಣಿ ಫುಲೇಶ್ವರಿ ದೇವಿ ಕಟ್ಟಿಸಿದ್ದು ಈಕೆ ಹಿಂದೂ ಧರ್ಮದ ಸಕ್ಟಾ ಪಂಥವನ್ನು ಪಾಲಿಸುತ್ತಿದ್ದಳು. ಇದನ್ನು ಅಸ್ಸಾಂ ರಾಜ್ಯದ ರಾಜ್ಯ ಧರ್ಮವನ್ನಾಗಿಸುವಲ್ಲಿ ಈಕೆಯ ಪ್ರಯತ್ನ ಬಹಳ ಮಹತ್ತರವಾದದ್ದು. ಇದರಿಂದಾಗಿ ಮಾವೋಮಾರಿಯಾ ಕ್ರಾಂತಿ ಸಂಭವಿಸಿತು. ಇದರ ಪ್ರಕಾರ ಮಾವೋಮಾರಿಯಾ ಜನರಿಗೆ ದುರ್ಗೆಯನ್ನು ಪೂಜಿಸುವಂತೆ ಒತ್ತಾಯಿಸಲಾಯಿತು.
150 ಎಕರೆ ಪ್ರದೇಶದಲ್ಲಿ ಹರಡಿರುವ ಈ ದೊಡ್ಡ ಕೊಳ ಹಾಗೂ ಮುರು ದೇವಾಲಯಗಳು ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಅಸ್ಸಾಂ ನ ವಿವಿಧ ಭಾಗದ ಜನಗಳಲ್ಲದೇ ದೇಶದ ನಾನಾ ಭಾಗಗಳ ಜನರೂ ಇಲ್ಲಿ ಭೇಟಿ ನೀಡುತ್ತಾರೆ. ಇದು ಒಂದು ಪಿಕ್ ನಿಕ್ ತಾಣವಾಗಿಯೂ ಹೆಸರುವಾಸಿ.