ಶಿವನಸಮುದ್ರವು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಪ್ರಸಿದ್ಧ ವಿಹಾರ ತಾಣವಾಗಿದೆ. ಈ ಸ್ಥಳವು ಕಾವೇರಿ ನದಿಯಲ್ಲಿರುವ ಒಂದು ವಿಶಿಷ್ಟವಾದ ದ್ವೀಪದ ಊರಾಗಿದೆ. ಇದರ ಹೆಸರಿನ ಅರ್ಥ ಶಿವನಿಗೆ ಸೇರಿದ ಸಮುದ್ರವೆಂದಿದೆ.
ದ್ವೀಪಗಳು, ಜಲಪಾತ ಮತ್ತು ವಿನೋದ.
ಈ ಸ್ಥಳವು ತನ್ನ ಜಲಪಾತದಿಂದಾಗಿ ಪ್ರಸಿದ್ಧವಾಗಿದೆ. ಈ ಜಲಪಾತವು ವಿಶ್ವದ ಪ್ರಮುಖ 100 ಜಲಪಾತಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ದಖನ್ ಪ್ರಸ್ಥಭೂಮಿಯಲ್ಲಿ ಹರಿಯುವ ಕಾವೇರಿ ನದಿಯು ಕಲ್ಲು ಬಂಡೆಗಳ ಮತ್ತು ಕೊರಕಲುಗಳ ಮಧ್ಯೆ ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಹೆಸರು ಪಡೆದು ಶಿವನ ಸಮುದ್ರದಲ್ಲಿ ದುಮ್ಮಿಕ್ಕುತ್ತ ಧುಮುಕುತ್ತವೆ.
ಈ ಎರಡು ಕವಲುಗಳು 98 ಮೀಟರ್ ಎತ್ತರದ ಬಂಡೆಯ ತುದಿಯಿಂದ ಧುಮ್ಮಿಕ್ಕುತ್ತ ಕೆಳಗೆ ಬೀಳುತ್ತವೆ. ಗಗನಚುಕ್ಕಿ ಜಲಪಾತವು ಬಂಡೆಯ ಪಶ್ಚಿಮ ಭಾಗದಲ್ಲಿದ್ದು, ಭರಚುಕ್ಕಿಯು ಪೂರ್ವದ ಭಾಗದಲ್ಲಿದೆ.
ಗಗನಚುಕ್ಕಿಯ ವಿಹಂಗಮನೋಟವು ಶಿವನ ಸಮುದ್ರದ ವೀಕ್ಷಣಾ ಗೋಪುರದಿಂದ ಸಿಗುತ್ತದೆ. ಅಥವಾ ಹಝರತ್ ಮರ್ದನೆ ಗಯಿಬ್ ರ ದರ್ಗಾದಿಂದ ನೋಡಬಹುದು. ಭರಚುಕ್ಕಿ ಜಲಪಾತವು ಗಗನ ಚುಕ್ಕಿ ಜಲಪಾತದಿಂದ 1 ಕಿ.ಮೀ ದೂರದಲ್ಲಿ ನೆಲೆಗೊಂಡಿದ್ದು , ಅದು ತನ್ನ ವೇಗದ ಪ್ರವಾಹಕ್ಕೆ ಮತ್ತು ಕಡಿದಾದ ಕೊರಕಲುಗಳಿಗೆ ಹೆಸರುವಾಸಿಯಾಗಿದೆ.
ಶಿವನ ಸಮುದ್ರವು ತನ್ನ ಊರಿನಲ್ಲಿರುವ ಪ್ರಾಚೀನ ದೇವಾಲಯಕ್ಕೆ ಹಾಗು ಏಶಿಯಾದ ಮೊಟ್ಟ ಮೊದಲ ಜಲ-ವಿದ್ಯುತ್ ಕೇಂದ್ರಕ್ಕೆ ಪ್ರಸಿದ್ಧವಾಗಿದೆ. ಈ ವಿದ್ಯುತ್ ಕೇಂದ್ರವನ್ನು ಕೋಲಾರದಲ್ಲಿರುವ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡಲು ನಿರ್ಮಿಸಲಾಯಿತು.
ಶಿವನಸಮುದ್ರಕ್ಕೆ ಬೆಂಗಳೂರಿನಂತಹ ನಗರದಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಶಿವನ ಸಮುದ್ರಕ್ಕೆ ಹೋಗಲು ಮಳೆಗಾಲದ ನಂತರದ ದಿನಗಳು ಅಂದರೆ ಜುಲೈ ನಿಂದ ಅಕ್ಟೋಬರ್ ತಿಂಗಳುಗಳು ಉತ್ತಮ.