ಮೂಲತಃ ಶಿರಡಿಯ ಮುಖ್ಯ ರಸ್ತೆಯಲ್ಲಿ ಖಂಡೋಬಾ ಮಂದಿರವೂ ನೆಲೆಸಿದೆ. ಖಂಡೋಬಾ ಈ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೈವವಾಗಿದೆ. ಈ ದೇವಾಲಯವು ಖಂಡೋಬಾ, ಬನಾಯಿ ಮತ್ತು ಮ್ಹಾಲ್ಸೈರ ಮೂರ್ತಿಗಳ ನೆಲೆಯಾಗಿದೆ.
ಪ್ರಸಿದ್ಧ ದಂತ ಕಥೆಯ ಪ್ರಕಾರ, ಒಮ್ಮೆ ಬಾಬಾರವರು ಯಾವುದೋ ಮದುವೆಯ ಉತ್ಸವಕ್ಕೆ ಬಂದಾಗ ಒಂದು ಆಲದ ಮರದ ಕೆಳಗೆ ವಿಶ್ರಮಿಸುತ್ತಿದ್ದರಂತೆ, ಆಗ ದೇವಾಲಯದ ಪೂಜಾರಿಯೂ ಬಾಬಾರನ್ನು “ ಅಹೋಯಿ ಸಾಯಿ “ ಎಂದು ಸ್ವಾಗತಿಸಿದರಂತೆ. ಈ ದೇವಾಲಯವು ಸಂದರ್ಶಕರಿಗೆಂದು ಮುಂಜಾನೆ 5 ರಿಂದ ರಾತ್ರಿ 10 ಘಂಟೆಯವರೆಗೆ ತೆರೆದಿರುತ್ತದೆ.