ಲಕ್ಷ್ಮಿ ಬಾಯಿ ಶಿಂಧೆ ರವರ ನಿವಾಸವು ಶಿರಡಿಯಲ್ಲಿನ ಹಲವು ಪ್ರಮುಖ ಗಮನಾರ್ಹ ಜಾಗಗಳಲ್ಲಿ ಒಂದಾಗಿದೆ. ಸಾಯಿ ಬಾಬಾರವರ ಯಾವುದೇ ನಿಷ್ಠಾವಂತ ಭಕ್ತರಿಗೆ ಲಕ್ಷ್ಮಿ ಬಾಯಿ ಶಿಂಧೆ ರವರು ಬಾಬಾರ ಜೀವನದಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ತಿಳಿಯದೆ ಇರಲಾರದು. ಬಾಬಾರವರು ಶಿರಡಿಗೆ ಬಂದ ನಂತರ ಅವರು ಅಕ್ಕಪಕ್ಕದ ಮನೆಗಳಲ್ಲಿ ಆಹಾರವನ್ನು ಬೇಡತೊಡಗಿದರು. ಅವರು ಲಕ್ಷ್ಮಿ ಬಾಯಿರವರ ಉಪಕಾರಗಳನ್ನು ಸದಾ ಸ್ಮರಿಸದೇ ಇರುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಬಾಬಾರವರು ಸಮಾಧಿ ಸೇರುವ ಅದುವೇ ಸ್ವರ್ಗಸ್ಥರಾಗುವ ಮುನ್ನಾ ಲಕ್ಷ್ಮಿ ಬಾಯಿ ಅವರಿಗೆ ಒಂದು 5 ರೂ ನೋಟಿನೊಂದಿಗೆ 4 ರೂ ಗಳನ್ನು ಸೇರಿಸಿ ಒಟ್ಟಾಗಿ 9 ರುಪಾಯಿಗಳನ್ನು ನೀಡಿದ್ದರು.
ಈ ಸನ್ನಿವೇಶದಿಂದ ಬಾಬಾರವರು ಓರ್ವ ಒಳ್ಳೆಯ ಶಿಷ್ಯನ ಒಂಬತ್ತು ಗುಣಗಳ ಮಹತ್ವವನ್ನು ಸಾರುವ ಪ್ರಯತ್ನವನ್ನು ಮಾಡಿದ್ದರು . . ಬಾಬಾರವರು ಲಕ್ಷ್ಮಿ ಬಾಯಿ ರವರಿಗೆ ಯಾವಾಗಲೂ ಉಡುಗೊರೆಗಳನ್ನು ನೀಡುತ್ತಿದ್ದರೂ, ಆ ಕೊನೆಯ 9 ರೂಪಾಯಿಯ ಉಡುಗೊರೆ ಅತ್ಯಂತ ಪ್ರಾಮುಖ್ಯತೆಯಿಂದ ನೆನೆಯಲಾಗುತ್ತದೆ.