ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ ಶಿವಮೊಗ್ಗದ ಪ್ರಸಿದ್ದ ಪ್ರವಾಸಿ ಗಮ್ಯಸ್ಥಳ. ಈ ಸಫಾರಿ ಪಾರ್ಕ್ ಶುರುವಾಗಿದ್ದು 1988 ರಲ್ಲಿ. ಸಹಜವಾದ ಸೌಂದರ್ಯ ಮತ್ತು ವಲಸೆ ಹಕ್ಕಿ ಹಾಗೂ ಪ್ರಾಣಿಗಳ ಮಿಶ್ರಣದಿಂದಾಗಿ ಚಿರತೆ, ಸಿಂಹ, ಹುಲಿ, ಜಿಂಕೆ, ಮತ್ತು ಕರಡಿಗಳೂ ಇಲ್ಲಿವೆ. ನಿಸರ್ಗ ಪ್ರಿಯರು ಖಂಡಿತವಾಗಿಯೂ ಈ ಸ್ಥಳವನ್ನು ಪ್ರೀತಿಸುತ್ತಾರೆ.
200 ಹೆಕ್ಟೇರ್ ಪ್ರದೇಶದ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಇಲ್ಲಿಗೆ ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಮಾನ್ಸೂನ್ ನಂತರದ ಸೆಪ್ಟೆಂಬರ್ ನಿಂದ ಜನವರಿ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ತ್ಯಾವರೆಕೊಪ್ಪದ ಸಮೀಪದಲ್ಲಿಯೇ ಹಲವಾರು ವನ್ಯಜೀವಿಧಾಮಗಳಿವೆ.
ಸುಮಾರು 15 ಕಿಲೋ ಮೀಟರ್ ದೂರವಿರುವ ಶಿವಮೊಗ್ಗ ತ್ಯಾವರೆಕೊಪ್ಪಕ್ಕೆ ಹತ್ತಿರದಲ್ಲಿರುವ ರೈಲ್ವೇ ನಿಲ್ದಾಣ. ಶಿವಮೊಗ್ಗ, ಸಾಗರ ಮತ್ತು ಬೆಂಗಳೂರಿನಿಂದ ತ್ಯಾವರೆಕೊಪ್ಪಕ್ಕೆ ಬಸ್ ಸೌಕರ್ಯಗಳಿವೆ. ಹೆಚ್ಚೂ ಕಡಿಮೆ 20 ನಿಮಿಷದ ಪ್ರಯಾಣವಿದ್ದು ಕ್ಯಾಬ್ ಅಥವಾ ಖಾಸಗಿ ವಾಹನಗಳು ದೊರೆಯುತ್ತವೆ.