ಚಮತ್ಕಾರ್ ಜೀ ಜೈನ್ ದೇವಾಲಯವು ಸವಾಯಿ ಮಾಧೊಪುರದ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ಆಕರ್ಷಣೆಯಾಗಿದೆ. ಇದು ರೈಲು ನಿಲ್ದಾಣಕ್ಕೆ ಸಾಗುವ ಮುಖ್ಯರಸ್ತೆಯಲ್ಲಿ ಬದಿಯಲ್ಲಿ ಕಂಡು ಬರುತ್ತದೆ. ಶ್ರೀ ಆದಿನಾಥ ಭಗವಾನರಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯವು,ಸುಮಾರು 400 ವರ್ಷಗಳಷ್ಟು ಹಳೆಯದು ಎಂದು ಭಾವಿಸಲಾಗಿದೆ.
ದಂತಕಥೆಗಳ ಪ್ರಕಾರ ಈ ದೇವಾಲಯವು ಹಲವು ಪವಾಡ ಸದೃಶ್ಯ ಶಕ್ತಿಯನ್ನು ಹೊಂದಿದೆಯಂತೆ. ಹಾಗಾಗಿ ಈ ದೇವಾಲಯಕ್ಕೆ “ ಚಮತ್ಕಾರ್ ದೇವಾಲಯ” ಎಂಬ ಹೆಸರು ಬಂದಿದೆ. ಇಲ್ಲಿನ ದೇವರಿಗೆ ಸೇವೆ ಸಲ್ಲಿಸಲು ಹಲವಾರು ಜೈನ ಭಕ್ತಾಧಿಗಳು ವರ್ಷಾಪೂರ್ತಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಈ ದೇವಾಲಯವು ಶರದ್ ಪೂರ್ಣಿಮೆಯಂದು ನಡೆಸುವ ವಾರ್ಷಿಕ ಉತ್ಸವಕ್ಕಾಗಿ ಖ್ಯಾತಿ ಪಡೆದಿದೆ. ಆ ಸಮಯದಲ್ಲಿ ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಜೈನ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಚಮತ್ಕಾರ್ ಜೀ ದೇವಾಲಯವು ಇಲ್ಲಿನ ಮಾಂತ್ರಿಕ ಮತ್ತು ಅಲೌಕಿಕ ವಾತಾವರಣದ ಸಲುವಾಗಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.