ಸಮಯವಿದ್ದಲ್ಲಿ ಸಾವನದುರ್ಗ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ಸ್ಥಳಕ್ಕೂ ಭೇಟಿ ನೀಡಬಹುದು. ತಿಪ್ಪಗೊಂಡನಹಳ್ಳಿ ಜಲಾಶಯವನ್ನು 1933ರಲ್ಲಿ ಕಟ್ಟಲ್ಪಟ್ಟಿದ್ದು. ಇದು ಭಾರತ ರತ್ನ ಸರ್ ಎಮ್ ವಿಶ್ವೇಶ್ವರಯ್ಯರವರ ಮೇಲ್ವಿಚಾರಣೆಯಲ್ಲಿ ನಿರ್ಮಿತವಾಗಿದೆ.ತಿಪ್ಪಗೊಂಡನಹಳ್ಳಿ ಜಲಾಶಯ ಬೆಂಗಳೂರಿನ ಹಲವು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ನೀಡಲು ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ಜಲಾಶಯವನ್ನು ಬೆಂಗಳೂರಿನ ನೀರು ಹಾಗು ಒಳಚರಂಡಿ ಆಯೋಗದ ಅಧೀನದಲ್ಲಿದೆ.ಪಕ್ಷಿಗಳನ್ನು ವೀಕ್ಷಿಸಲು ಚಾಮರಾಜಸಾಗರ ಅಥವಾ ಟಿಜಿ ಹಳ್ಳಿ ಡ್ಯಾಮ್ ಎಂದೂ ಕರೆಯಲ್ಪಡುವ ಈ ಸ್ಥಳವು ಅತ್ಯಂತ ಸೂಕ್ತ ತಾಣವಾಗಿದೆ. ಸೆಪ್ಟೆಂಬರ್ ಇಂದ ಫೆಬ್ರವರಿ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಬೇಟಿ ನೀಡಲು ಸೂಕ್ತ ಸಮಯ.