ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರು, ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಮಂಚಿನಬೆಲೆ ಆಣೆಕಟ್ಟಿಗೆ ಭೇಟಿ ನೀಡುವುದು ಒಳಿತು ಎಂಬುದು ನಮ್ಮ ಸಲಹೆ. ಮಾಗಡಿ ಪಟ್ಟಣಕ್ಕೆ ನೀರಾವರಿ ಸೌಲಭ್ಯ ನೀಡಲು ತಿಪ್ಪಗೊಂಡನಹಳ್ಳಿ ಜಲಾಶಯದ ಮಾದರಿಯಲ್ಲಿ ಮಂಚಿನಬೆಲೆ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಇದನ್ನು ಮಂಚನಬೆಲೆ ಹಾಗು ಮಂಚಿನಬೆಲೆ ಎಂದು ಸಹ ಕರೆಯಲಾಗುತ್ತದೆ. ನೀರಾವರಿಗಾಗಿ ಬಳಸುವ ಈ ಪ್ರದೇಶವನ್ನು “ತೊರೆ ಸಾಲು” ಎನ್ನುತ್ತಾರೆ, ಇದರ ಅರ್ಥ “ನದಿ ಸಾಲು”. ಪಟ್ಟಣದಿಂದ ದೂರ ಸಮಯ ಕಳೆಯಲು ಯೋಚಿಸುವವರಿಗೆ ಮಂಚಿನಬೆಲೆ ಅಣೆಕಟ್ಟುಸೂಕ್ತ ಸ್ಥಳವಾಗಿದೆ. ಅಲ್ಲದೆ ಪಕ್ಷಿಗಳನ್ನು ವೀಕ್ಷಿಸಲು ಮತ್ತು ಮನರಂಜನೆಗೆ ಇದು ಸೂಕ್ತ ಸ್ಥಳವಾಗಿದೆ . ಬೆಂಗಳೂರಿಂದ 40 ಕಿಮೀ ದೂರವಿರುವ ಈ ಸ್ಥಳವನ್ನು ನೋಡಲು ಬಯಸುವವರು ಮಾಗಡಿ ರಸ್ತೆಯ ಮೂಲಕ ತಲುಪಬಹುದು. ಸೆಪ್ಟೆಂಬರ್ ಇಂದ ಫೆಬ್ರವರಿ ಮಂಚಿನಬೆಲೆ ಡ್ಯಾಮ್ ನೋಡಲು ಸೂಕ್ತ ಸಮಯ.