ಭಾರತದಲ್ಲಿ ಭೌದ್ಧ ಧರ್ಮದ ಹುಟ್ಟು ಮತ್ತು ಅರಿವಿಗೆ ಸಾರನಾಥ ಕಾರಣವಾಗಿದೆ. ಇಲ್ಲಿ ಬುದ್ಧ ಬೌದ್ಧ ಧರ್ಮದ ಮೊದಲ 5 ತತ್ವಗಳು, 4 ಉದಾತ್ತ ಸತ್ಯಗಳು ಮತ್ತು ಅಷ್ಟ ಮಾರ್ಗವನ್ನು ತಿಳಿಸಿದನು. ನಂತರ ಅಶೋಕ ಚಕ್ರವರ್ತಿಯು ಇಲ್ಲಿ ಅನೇಕ ಸ್ತೂಪಗಳನ್ನು ಕಟ್ಟಿದನು.
1930 ರಲ್ಲಿ ಮಾಡಲಾದ ಭಾರತೀಯ ಪುರಾತತ್ವ ಸರ್ವೇ ಪ್ರಕಾರ, ಅನೇಕ ಸ್ಮಾರಕಗಳು, ರಚನೆಗಳು ಇಲ್ಲಿ ದೊರೆಯಿತು. ಅದನ್ನು ಈ ಸಂಗ್ರಹಾಲಯದಲ್ಲಿ ಇಡಲಾಗಿದೆ. ಇದು 3 ರಿಂದ 12 ನೇ ಶತಮಾನದ ಎಲ್ಲಾ ಸ್ಮಾರಕಗಳನ್ನು ಮತ್ತು ಬೌದ್ಧ ಕಲೆಗಳ ಮಾದರಿಯನ್ನು ಹೊಂದಿದೆ. ಮ್ಯೂಸಿಯಂ 5 ಗ್ಯಾಲರಿ ಮತ್ತು 2 ವರಾಂಡಗಳನ್ನು ಹೊಂದಿದೆ.