ಪ್ರಾಚೀನ ಅವಶೇಷಗಳ ನಡುವೆ ಇರುವ ಸಾರನಾಥದ ಮುಳಗಂಧ ಕುಟಿ ವಿಹಾರ ತನ್ನ ವಿಶಿಷ್ಟ ವಿನ್ಯಾಸದಿಂದ ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ. ಇದು ಮಹಾಭೋದಿ ಸೊಸೈಟಿಯಿಂದ ಇತ್ತೀಚಿಗೆ ಅಂದರೆ 1931 ರಲ್ಲಿ ಕಟ್ಟಲಾಯಿತು. ಈ ದೇವಾಲಯವು ಹೆಮ್ಮೆ ಪಡುವ ಅತಿ ವಿಶಿಷ್ಟವಾದ ಜಪಾನಿನ ಚಿತ್ರಕಾರನಾದ ಕೊಸೆತ್ಸು ನೋಸು ಬಿಡಿಸಿದ ವಿನ್ಯಾಸವನ್ನು ಹಾಗು ಸುಂದರ ಭಿತ್ತಿ ಚಿತ್ರಗಳು,ಹಸೆ ಚಿತ್ರಗಳು ಪ್ರಭಾವಶಾಲಿಯಾದ ಮಾದರಿಗಳನ್ನು ಹೊಂದಿದೆ.
ಜಪಾನಿನ ರಾಯಲ್ ಕುಟುಂಬದವರು ಉಡುಗೊರೆಯಾಗಿ ಕೊಟ್ಟ ದೊಡ್ಡ ಕಂಚಿನ ಘಂಟೆ ಕೂಡ ಇಲ್ಲಿದೆ. ಮಾನವ ಗಾತ್ರದ ಬುದ್ಧನ ಚಿನ್ನದ ಪ್ರತಿಮೆ ಇದೆ. ಶ್ರೀಲಂಕಾ ದಿಂದ ತಂದ ಬೋಧಿ ವೃಕ್ಷದಿಂದ ಕಸಿ ಮಾಡಲಾದ ವೃಕ್ಷವನ್ನು ಕೂಡ ಇಲ್ಲಿ ಕಾಣಬಹುದು. ಶ್ರೀಲಂಕಾದ ಆ ವೃಕ್ಷವು ಸುಮಾರು 2500 ವರ್ಷಗಳ ಹಿಂದೆ ಬುದ್ಧನು ಬೋಧಗಯಾದ ಯಾವ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡದನೊ ಅದರ ಮೂಲದಿಂದಲೆ ಉದ್ಭವಿಸಿದೆ ಎನ್ನಲಾಗಿದೆ.