ಸಾರನಾಥದ ಜಿಂಕೆ ಉದ್ಯಾನವನಕ್ಕೆ ಬೌದ್ಧರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ; ಏಕೆಂದರೆ ಇಲ್ಲಿ ಬುದ್ಧನು ತನ್ನ ಮೊದಲ ಧರ್ಮ ಬೋಧನೆಯನ್ನು ಮಾಡಿದನು. ಇಲ್ಲಿ ಬುದ್ಧನ ಮೊದಲ ಜ್ನಾನೋದಯವಾದದ್ದರಿಂದ ಬೌದ್ಧ ಸಮಾಜದಿಂದ ಮೊದಲ ಸಂಘ ಪ್ರಾರಂಭಿಸಲಾಯಿತು ಎನ್ನಲಾಗಿದೆ.
ನೀವು ಜಿಂಕೆ ಉದ್ಯಾನವನವನ್ನು ಭೇಟಿ ನೀಡಿದರೆ ಅಲ್ಲೇ 1 ಕಿ ಮೀ ಅಂತರದಲ್ಲಿರುವ ಹಳ್ಳಿ ಸಿಂಗ್ ಪುರ್ ಅನ್ನು ಭೇಟಿ ನೀಡಬಹುದು. ಇದು ಜೈನರ 11 ನೆ ತೀರ್ಥಂಕರನಾದ ಶ್ರೀಯಾಂಸನಾಥ ಹುಟ್ಟಿದ ಹಳ್ಳಿ. ಅವರಿಗೆ ಸಂಬಂಧಪಟ್ಟ ಒಂದು ದೇವಾಲಯ ಈ ಹಳ್ಳಿಯಲ್ಲಿದ್ದು ಅದು ಜೈನರ ಪ್ರಮುಖ ಯಾತ್ರಾಸ್ಥಳವಾಗಿದೆ.