ಚೌಕಂಡಿ ಸ್ತೂಪವು ವಾರಣಾಸಿಯಿಂದ 13 ಕಿ ಮೀ ಅಂತರದಲ್ಲಿರುವ ಸಾರನಾಥದಲ್ಲಿದೆ. ಚೌಕಂಡಿ ಬೌದ್ಧ ಜನಾಂಗದವರಿಗೆ ಪೂಜ್ಯನೀಯ ಸ್ಥಳವಾಗಿದೆ. ಈ ಸ್ತೂಪವು ಬುದ್ಧನಿಗೆ ಸಂಬಂಧಿಸಿದ ಅವಶೇಷಗಳನ್ನು ಹೊಂದಿದೆ. ಬುದ್ಧನು ಬೋಧಗಯಾ ದಿಂದ ಸಾರನಾಥಕ್ಕೆ ಪ್ರಯಾಣಿಸುತ್ತಿದ್ದಾಗ ಇಲ್ಲಿ ಮೊದಲ ಭಾರಿಗೆ ಅನುಯಾಯಿಗಳನ್ನು ಭೇಟಿ ಆದನು ಆ ಸ್ಥಳವನ್ನು ಗುಪ್ತರು ತಮ್ಮ ಕಾಲದಲ್ಲಿ ಅಂದರೆ 4 ರಿಂದ 6 ನೇ ಶತಮಾನದಲ್ಲಿ ಇಲ್ಲಿ ಗೃಹಪಂಕ್ತಿ ಉಳ್ಳ ದೇವಾಲಯವನ್ನು ಕಟ್ಟಿದ್ದರು. ಮೊಘಲ್ ಚಕ್ರವರ್ತಿ ಹುಮಾಯೂನ್ ನ ಭೇಟಿಯ ಸ್ಮರಣಾರ್ಥವಾಗಿ ಅಷ್ಟಭುಜಾಕೃತಿಯ ಗೋಪುರವನ್ನು ನಂತರ ಸ್ತೂಪವಾಗಿ ಮಾರ್ಪಡಿಸಲಾಯಿತು.
ನೀವು ಚೌಕಂಡಿ ಸ್ತೂಪವನ್ನು ಭೇಟಿ ನೀಡಿದರೆ ಅಲ್ಲೇ ಹತ್ತಿರದಲ್ಲಿರುವ ಅಶೋಕ ಸ್ಥಂಬ, ದಮೇಖ ಸ್ತೂಪ, ಧರ್ಮಜಿಕ ಸ್ತೂಪ ಮತ್ತು ಧರ್ಮಚಕ್ರ ಸ್ತೂಪ, ಮುಳಗಂಧ ಕುಟಿ ದೇವಾಲಯವನ್ನು ಭೇಟಿ ನೀಡಬಹುದು.