ಅಶೋಕ ಸ್ಥಂಬ ವಾಸ್ತವವಾಗಿ ಉತ್ತರ ಭಾರತದಲ್ಲಿ ಕಂಡು ಬಂದ ವಸಾಹತು ಶ್ರೇಣಿ ಆಗಿದೆ. ಹೆಸರೇ ಹೇಳುವಂತೆ ಈ ಸ್ಥಂಬವನ್ನು 3 ನೇ ಶತಮಾನದಲ್ಲಿ ಅಶೋಕನು ಕಟ್ಟಿಸಿದನು. ಇದರ ಖಂಬಗಳು ಅಂದಾಜು ಒಂದೊಂದು 40 ರಿಂದ 50 ಅಡಿಗಳಷ್ಟು ಎತ್ತರವಿದ್ದು ಸುಮಾರು 50 ಟನ್ ನಷ್ಟು ತೂಕವನ್ನು ಹೊಂದಿವೆ. ಇದನ್ನು ನಿರ್ಮಿಸಲು ಬೇಕಾಗಿದ್ದ ಕಲ್ಲುಗಳನ್ನು ವಾರಣಾಸಿ ಬಳಿ ಇರುವ ಪಟ್ಟಣ ಚುನಾರ್ ನಿಂದ ತರಲಾಗಿತ್ತು.
ಇಲ್ಲಿ ಅನೇಕ ಸ್ಥಂಬಗಳನ್ನು ನಿರ್ಮಿಸಲಾಗಿದ್ದರೂ ಪ್ರಸ್ತುತ ಕೇವಲ 19 ಶಾಸನವಿರುವ ಖಂಬಗಳು ಮಾತ್ರ ಉಳಿದಿವೆ. ಅದರಲ್ಲಿ ಅಶೋಕ ಸ್ಥಂಬ ಪ್ರಖ್ಯಾತಿ ಪಡೆದಿದೆ. ಇದು ಸುತ್ತಲೂ 4 ಸಿಂಹದ ಗುರುತನ್ನು ಹೊಂದಿದ್ದು ಇದನ್ನು ರಾಷ್ಟ್ರ ಲಾಂಛನದಲ್ಲಿ ಬಳಸಲಾಗಿದೆ. ಈ 4 ಸಿಂಹಗಳು ಶಕ್ತಿ, ಧೈರ್ಯ, ಹೆಮ್ಮೆ ಮತ್ತು ವಿಶ್ವಾಸದ ಸಂಕೇತವಾಗಿದೆ. ಇದರ ತಳಭಾಗದಲ್ಲಿರುವ ಅಶೋಕ ಚಕ್ರವನ್ನು ರಾಷ್ಟ್ರ ದ್ವಜದ ಮಧ್ಯದಲ್ಲಿ ಬಳಸಲಾಗಿದೆ.