ಭಾರತೀಯ ಪುರಾತತ್ವ ಸರ್ವೇ 1907 ರಿಂದ ಸಾರನಾಥದಲ್ಲಿ ಉತ್ಖನನ ಗಳನ್ನು ಆಯೋಜಿಸುತ್ತಲೇ ಬಂದಿದೆ. ಬೌದ್ಧ ವಿಕಸನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಇದು ಅನಾವರಣ ಮಾಡಿದೆ. ಮುಖ್ಯ ಉತ್ಖನನವು ಹಲವಾರು ಸ್ಮಾರಕಗಳು ಮತ್ತು ರಚನೆಗಳನ್ನು ಒಳಗೊಂಡಿದೆ. ಪ್ರಾಚೀನ ಚಿಹ್ನೆಗಳು ಮತ್ತು ಸಂಕೇತಗಳನ್ನು ಸ್ಮಾರಕಗಳ ಮೇಲೆ ಕೆತ್ತಲಾಗಿದೆ. ಇದನ್ನು ಬುದ್ಧನ ಸಂದೇಶದ ಸಂವಹನಗಳನ್ನು ಹರಡಲು ಕೆತ್ತಲಾಗಿದೆ.
ಕ್ರಿ,ಪೂ 250 ರಲ್ಲಿ ಕಟ್ಟಲಾದ ಅಶೋಕ ಸ್ಥಂಬ ಮೊದಲ ಮತ್ತು ಅತ್ಯಂತ ಕುತೂಹಲಕಾರಿ ರಚನೆಗಳಲ್ಲಿ ಒಂದಾಗಿದೆ. ಇನ್ನೊಂದು ಮುಖ್ಯವಾದ ಸ್ತೂಪ ಎಂದರೆ ಭಾರತೀಯ ಇತಿಹಾಸದ ಗುಪ್ತರ ಕಾಲದ ದಮೇಖ ಸ್ತೂಪ. ನಂತರ 4 ರಿಂದ 12 ನೆ ಶತಮಾನದವರೆಗೆ ಸಾಕಷ್ಟು ಮಠಗಳು ಬಂದವು. ಸಾರನಾಥವು ಇತಿಹಾಸಕಾರರಿಗೆ ಮತ್ತು ಬೌದ್ಧ ವಿದ್ವಾಂಸರಿಗೆ ಮಠಗಳು ಮತ್ತು ರಚನೆಗಳ ಬಗ್ಗೆ ಸ್ಥಂಬದ ಮೇಲೆ ಕೆತ್ತಿದ ಲಿಪಿಗಳ ಬಗ್ಗೆ ಅಧ್ಯಯನ ಮಾಡಲು ಆಸಕ್ತಿಕರ ಪ್ರದೇಶವಾಗಿದೆ.