ಪಾಂಡುಪೋಲಿನ ಹನುಮಾನ್ ದೇವಾಲಯವು ಸರಿಸ್ಕ ರಾಷ್ಟ್ರೀಯ ಹುಲಿ ಮೀಸಲು ಅರಣ್ಯದ ನಡುವೆ ನೆಲೆಗೊಂಡಿದೆ. ಇದು ಸರಿಸ್ಕಾದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ತುಂಬಾ ಜನ ಇಲ್ಲಿಗೆ ಭೇಟಿಕೊಡುತ್ತಾರೆ. ಪಾಂಡುಪೋಲ್ ಅಥವಾ ಪಾಂಡು ದ್ವಾರದಲ್ಲಿ ಒಂದು ಮಂತ್ರ ಮುಗ್ಧಗೊಳಿಸುವಂತಹ ನೀರಿನ ಝರಿಯಿದ್ದು, ಅದು ಕಠಿಣವಾದ ಮತ್ತು ದುರ್ಗಮವಾದ ಕಲ್ಲು ಬಂಡೆಗಳ ನಡುವೆ ಹರಿಯುತ್ತದೆ. ದಂತಕಥೆಗಳ ಪ್ರಕಾರ ಪಾಂಡವರು ಅಙ್ಞಾತವಾಸದಲ್ಲಿದ್ದಾಗ ಇಲ್ಲಿ ಆಶ್ರಯ ಪಡೆದಿದ್ದರೆಂದು ಹೇಳಲಾಗುತ್ತದೆ. ಮತ್ತೊಂದು ದಂತಕಥೆಯ ಪ್ರಕಾರ ಈ ಸ್ಥಳದಲ್ಲಿ ಭೀಮನು ಆಂಜನೇಯನಿಂದ ಸೋಲಿಸಲ್ಪಟ್ಟನೆಂದು ಸಾರಲಾಗುತ್ತಿದೆ.ಇಲ್ಲಿರುವ ಹನುಮಾನ್ ದೇವಾಲಯವು ಬೃಹತ್ತಾದ ಆಂಜನೇಯನ ವಿಗ್ರಹವನ್ನು ಹೊಂದಿದೆ. ಮಳೆಗಾಲದಲ್ಲಿ ಇಲ್ಲೊಂದು ಜಲಪಾತವನ್ನು ಕಾಣಬಹುದಾಗಿದೆ. ಅಲ್ಲದೆ ವಿವಿಧ ಬಗೆಯ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಲಂಗೂರ್ ಮತ್ತು ಸಿಂಗಳೀಕಗಳಂತಹ ಮಕಾಕೆಸ್ ಅನ್ನು ಸಹ ಈ ದೇವಾಲಯದ ಆವರಣದ ಒಳಗಡೆ ನಾವು ಕಾಣಬಹುದು.