ಗುಜರಾತಿನ ನರ್ಮದಾ ಜಿಲ್ಲೆಯಲ್ಲಿ ಶೂಲ್ಪನೇಶ್ವರ ವನ್ಯಜೀವಿ ಧಾಮ ಇದೆ. ಇಲ್ಲಿ ಸುಮಾರು 575 ತಳಿಯ ಹೂಗಿಡಗಳಿವೆ. ಹಾಗೂ ಸದಾ ಹಸಿರಾಗಿರುವ ಅರಣ್ಯವೂ ಇದೆ. ಇಲ್ಲಿ ಸಾಕಷ್ಟು ಬಿದಿರಿನ ಮರಗಳೂ ಇವೆ. ಈ ವನ್ಯ ಜೀವಿ ಧಾಮವು ಸುಮಾರು 607.70 ಚ.ಕಿ.ಮೀ ವ್ಯಾಪಿಸಿದೆ ಹಾಗೂ ಇಲ್ಲಿ ವಿವಿಧ ಪ್ರಾಣಿಗಳಿವೆ ಅವೆಂದರೆ ಕರಡಿ, ಚಿರತೆ, ಚಿಕ್ಕ ಬಾಲದ ಕೋತಿ, ಚೌಸಿಂಗಾ, ಬಾರ್ಕಿಂಗ್ ಡೀರ್, ಇರುವೆ ಭಕ್ಷಕ ಪ್ರಾಣಿ ಮತ್ತು ಹೆರ್ಪೆಟೊಫೌನಾ.
ಇದೊಂದು ಉತ್ತಮ ಪರಿಸರ ಸ್ನೇಹಿ ಪ್ರವಾಸಿ ತಾಣವಾಗಿದೆ. ಈ ಅಭಯಾರಣ್ಯದಲ್ಲಿ ಸರ್ದಾರ್ ಸರೋವರ ಹಾಗು ಕಂಜನ್ ಜಲಾಶಯಗಳು ಸ್ಥಿತಗೊಂಡಿವೆ. ಗುಜರಾತಿನಲ್ಲಿ ಕಾಣಬಹುದಾದ ಕೆಲವು ಉತ್ತಮ ಕಾಡುಗಳಲ್ಲಿ ಇದು ಕೂಡ ಒಂದು. ಇಲ್ಲಿನ ಪ್ರಕೃತಿ ಸೌಂದರ್ಯವು ಪ್ರವಾಸಿಗರ ಮನದಲ್ಲಿ ರೋಮಾಂಚನದ ಅನುಭವವನ್ನು ಉಂಟುಮಾಡುತ್ತದೆ.
ಈ ಕಾಡಿನಲ್ಲಿ ವೈವಿಧ್ಯಮಯ ಕಾಡು ಪ್ರಾಣಿಗಳಲ್ಲದೆ ಸ್ಥಳೀಯ ಬುಡಕಟ್ಟು ಜನಾಂಗಗಳು ಕೂಡ ವಾಸಿಸುವುದನ್ನು ಕಾಣಬಹುದು. 'ವಾಸವ' ಎಂಬ ಪ್ರಮುಖವಾದ ಬುಡಕಟ್ಟು ಜನಾಂಗ ಇಲ್ಲಿದೆ. ಇವರು ತಮ್ಮ ಜೀವನ ನಿರ್ವಹಣೆಗೆ ಹೆಚ್ಚಾಗಿ ಕಾಡನ್ನೇ ಅವಲಂಬಿಸಿದ್ದಾರೆ. ಸ್ಥಳೀಯವಾಗಿ ದೊರಕುವ ಬಿದಿರಿನಿಂದ ಮನೆಗಳನ್ನು ನಿರ್ಮಿಸಿಕೊಂಡು ಕಾಡಿನಲ್ಲಿ ಬೆಳೆಯುವ ಹಣ್ಣು ಹಂಪಲಗಳನ್ನು ತಿನ್ನುತ್ತಾರೆ.