ಕಂಜೇತಾ ಪರಿಸರ ಶಿಬಿರ ರತನ್ ಮಹಲ್ ಕರಡಿ ಅಭಯಾರಣ್ಯದ ಒಳಗೆ ಇದೆ. ಇಲ್ಲಿ ಕರಡಿಗಳು ಮುಖ್ಯ ಪ್ರಾಣಿಗಳಾದರೂ ಜೊತೆಗೆ ಚಿರತೆಗಳು, ಕಾಡುಬೆಕ್ಕುಗಳು ಸಿವೆಟ್ ಗಳು, ನರಿಗಳು ಮತ್ತು ಹೈನಾ ಕೂಡ ಇವೆ. ಇಲ್ಲಿನ ಸುತ್ತಮುತ್ತಲ ಆಕರ್ಷಕ ಪರಿಸರ ಇದನ್ನು ಮತ್ತಷ್ಟು ಮನಮೋಹಕ ಸ್ಥಳವನ್ನಾಗಿಸಿದೆ.
ಪನಂ ನದಿ ಈ ಅಭಯಾರಣ್ಯದಲ್ಲಿ ಉಗಮವಾಗುತ್ತದೆ. ಪ್ರಕೃತಿ ಪ್ರಿಯರು ಇಲ್ಲಿಗೆ ಬಂದಂತೆ ಇಲ್ಲಿನ ಸುಂದರ ನೋಟಗಳಿಗೆ ಮನಸೋಲುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಕ್ಯಾಂಪ್ ಮತ್ತು ವಸತಿ ವ್ಯವಸ್ಥೆ ಕೂಡ ಇದೆ.