ಶಿರಖಂಡ್ ಮಹಾದೇವ್, ಸಮುದ್ರ ಮಟ್ಟದಿಂದ 5155 ಮೀಟರ್ ಎತ್ತರದಲ್ಲಿದೆ. ಇದು ಶಿವನ ಹಿಂದೂ ದೇವರಿಗೆ ಮೀಸಲಾದ ಪ್ರಸಿದ್ಧ ಹಿಂದೂ ಯಾತ್ರಾ ಕೇಂದ್ರವಾಗಿದೆ. ಒಂದು ಕಥೆಯ ಪ್ರಕಾರ, ಶಿವ ಈ ಉತ್ತುಂಗದಲ್ಲಿ ಧ್ಯಾನ ಮಾಡುತ್ತಿದ್ದನು ಎಂದು ಹೇಳಲಾಗುತ್ತದೆ. ಮತ್ತೊಂದು ದಂತಕಥೆಯ ಪ್ರಕಾರ ಭಾರತದ ಮಹಾಕಾವ್ಯ ’ಮಹಾಭಾರತ’ದಲ್ಲಿ ಪ್ರಸ್ತುತ ಪಡಿಸಲಾದ ಪಾಂಡವರು ಈ ಶಿಖರವನ್ನು ಏರಿದ್ದರು ಎಂದೂ ಪ್ರತೀತಿಯಿದೆ.
ಸ್ಥಳೀಯರು ಈ ಶಿಖರದ ಮೇಲಿರುವ 'ಶಿವಲಿಂಗಗಳು', ಶಿವನ ಸಂಕೇತವಾಗಿದ್ದು, ಶಿವನಿಗೆ ಸಂಬಂಧಿಸಿದ ಪವಾಡ ಎಂದು ಹೇಳಿಕೊಳ್ಳುತ್ತಾರೆ. ಏಕೆಂದರೆ ಈ ಪ್ರದೇಶದಲ್ಲಿ ಹಿಮಪಾತವಾದರೂ ಹಿಮವು ಎಂದೂ ಈ ಲಿಂಗಗಳ ಮೇಲೆ ಬೀಳುವುದಿಲ್ಲ, ಒಂದು ವೇಳೆ ಬಿದ್ದಿದ್ದೆ ಆದರೂ ಬೇಗನೆ ಕರಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ. ಶ್ರೀಖಂಡ ಮಹಾದೇವ್, ಗ್ರೇಟ್ ಹಿಮಾಲಯ ನ್ಯಾಷನಲ್ ಪಾರ್ಕ್ ನ ಒಂದು ಭಾಗವಾಗಿದೆ, ಆದ್ದರಿಂದ ಇದು ಪ್ರವಾಸಿಗರಿಗೆ ಶ್ರೀಮಂತ ಸಸ್ಯರಾಶಿಯ ಸುಂದರ ನೋಟವನ್ನು ಒದಗಿಸುತ್ತದೆ.