ಸಂಗಮೇಶ್ವರ ದೇವಾಲಯ, ಸಂಗಮ- ಮೇಕೆದಾಟುನ ಭೇಟಿ ನೀಡಲೇಬೇಕಾದ ಪ್ರಮುಖ ಆಕರ್ಷಣೆಗಳಲೊಂದು. ಇದು ಅರ್ಕಾವತಿ ಮತ್ತು ಕಾವೇರಿ ನದಿಗಳು ಕೂಡುವ ಸ್ಥಳದಲ್ಲಿದೆ. ಭಗವಾನ ಶಿವನ ರೂಪವಾದ, ಭಗವಾನ ಸಂಗಮೇಶ್ವರನಿಗೆ ಈ ದೇವಾಲಯ ಮೀಸಲಾಗಿದ್ದು, ದತ್ತಾತ್ರೇಯನ ಭಕ್ತರಲ್ಲಿ ಇದು ಜನಪ್ರಿಯಗೊಳ್ಳುತ್ತಿದೆ. ಸಾಂಸ್ಕೃತಿಕ ಸಂರಕ್ಷಕರಾದ ಪರಮ ಗುರು ಮಾತಾ ಜಯಾ ಲಕ್ಷ್ಮಿ, ಈ ಸಂಗಮೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತದೆ. 2007 ರಲ್ಲಿ, ಈ ದೇವಸ್ಥಾನವನ್ನು ಅವಧೂತ ದತ್ತ ಪೀಠದವತಿಯಿಂದ ನವೀಕರಿಸಲಾಯಿತು ಮತ್ತು ಗೋಡೆಗಳನ್ನು ಅಲಂಕರಿಸಲು ಬೆಣಚು ಕಲ್ಲಿನ ಛಾವಣಿಗಳನ್ನು ಬಳಸಲಾಗಿದೆ. ದೇವಾಲಯದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕಂಪೌಂಡ ಗೋಡೆಗೆ ಮೊನಚಿನ ಬೇಲಿಗಳನ್ನು ಜೋಡಿಸಲಾಗಿದೆ.