ಸಂತ ಕವಿ ಭೀಮ ಭೋಯಿಯ ಅನುಯಾಯಿಗಳಿಗೆ ಧಾರ್ಮಿಕ ಸ್ಥಳವಾಗಿದೆ. ಇದು ಸಂಬಲ್ಪುರದಿಂದ 78 ಕಿಮೀ ದೂರದಲ್ಲಿದೆ. ಈ ಹಳ್ಳಿಯು ವಾಣಿಜ್ಯ ಪ್ರವಾಸೋದ್ಯಮ ಸಂಸ್ಕೃತಿಯಿಂದ ದೂರವಾಗಿದೆ. ಈ ಹಳ್ಳಿಯು ಸಂತ ಭೀಮ ಭೋಯಿಯ ಜನ್ಮಸ್ಥಳವಾಗಿದ್ದು ವೇಗದ ಪ್ರಪಂಚದಿಂದ ದೂರವಾಗಿ ಪ್ರಶಾಂತವಾಗಿದೆ. ಸಂತ ಭೀಮ ಭೋಯಿಯು ಅಲೇಖ ಧರ್ಮ ಅಥವ ಮಹಿಮಾ ಧರ್ಮದ ಅನುಯಾಯಿಯಾಗಿದ್ದ. 1866ರಲ್ಲಿ ಒಡಿಶಾದ ಈ ದ್ವೀಪದಲ್ಲಿ ಸುಮಾರು ಒಂದು ಮಿಲಿಯನ್ ಮಂದಿಯನ್ನು ಸಂತ ಭೀಮ ಭೋಯಿಯ ಧ್ವನಿ ತಲುಪಿತ್ತು. ನದಿಪ್ರವಾಹದಿಂದಾಗಿ ಒಡಿಸ್ಸಾದ ಜನತೆ ಆಹಾರ ಮತ್ತು ಪರಿಹಾರದ ನೆರವಿಗಾಗಿ ಪರಿತಪಿಸುತಿತ್ತು. ಹುಟ್ಟುಗುರುಡನಾಗಿದ್ದ ಕವಿ ಭೀಮ ಭೋಯಿಯು ಜನರ ಈ ನೋವನ್ನು ಹಾಡಾಗಿಸಿದ. ಈ ಹಳ್ಳಿಗೆ ಭೇಟಿ ನೀಡಿದರೆ ಒಡಿಶಾ ಹೇಗಿದೆ ಎನ್ನುವುದರ ಅನುಭವವನ್ನು ಪಡೆಯಬಹುದು.