ಮಾಯಮ್ಮ ಆಶ್ರಮವು ದೇವಿ ಮಾಯಮ್ಮನ ಸಮಾದಿ ಇರುವ ಆಶ್ರಮವಾಗಿದೆ. ದೇವಿ ಮಾಯಮ್ಮ ಒಬ್ಬ ಮಹಿಳಾ ಅವಧೂತ ಳಾಗಿದ್ದು ಕನ್ಯಾಕುಮಾರಿ ಇಂದ ಬಂದು ಇಲ್ಲಿ ನೆಲೆಸಿದ್ದಳು. ಮೊದಲು ಯರ್ಕಾದ್ ಬೆಟ್ಟದ ಗಡಿಗಳಲ್ಲಿ ನೆಲಸಿದ ಮಾಯಮ್ಮ ನಂತರ 1992 ರಲ್ಲಿ ಈ ಭಾಗದಲ್ಲಿ ಇಹಲೋಕ ಪರಿತ್ಯಾಗವನ್ನು ಮಾಡಿದಳು. ಪ್ರತಿ ವರ್ಷ ಅವಳ ದೇಹತ್ಯಾಗ ದಿನವಾದ ಫೆಬ್ರವರಿ 9 ರಂದು ಸಮಾಧಿ ದಿನವನ್ನು ಆಚರಿಸಲಾಗುತ್ತಿದ್ದು ಸಾವಿರಾರು ಭಕ್ತರು ಸೇರುತ್ತಾರೆ. ಅಲ್ಲಿರುವ ಗುಡಿಯು ಮಾಯಮ್ಮನ ಭಕ್ತ ರಾಜೇಂದ್ರನ್ ಅವರಿಂದ ನಡೆಯುತ್ತಿದೆ. ಈ ಸ್ಥಳವು ಯೋಗ, ಪ್ರಾರ್ಥನೆಗಳಿಗೆ ಯೋಗ್ಯ ಸ್ಥಳವಾಗಿದೆ. ಈ ಸ್ಥಳವು ನಗರದ ಸಾಧಾರಣ ಜೀವನದಿಂದ ಸ್ವಲ್ಪ ಕಾಲ ವಿರಾಮ ಬಯಸುವ ಯಾತ್ರಾರ್ತಿಗಳು ಮತ್ತು ಪ್ರವಾಸಿಗರಿಗೆ ಸೂಕ್ತ ಸ್ಥಳ ಇದಾಗಿದೆ.