ಆಯೋದ್ಯಪಟ್ಟಿನ ಶ್ರೀ ಕೋದಂಡಪಣಿ ರಾಮ ದೇವಾಲಯವು ಆಯೋದ್ಯಪಟ್ಟಿನದಲ್ಲಿದೆ. ರಾಮನ ಪಾದಚಿತ್ರಗಳು ಇಲ್ಲಿ ಕಂಡು ಬಂದದ್ದರಿಂದ ಇದಕ್ಕೆ ಈ ಹೆಸರು ನೀಡಲಾಯಿತು. ದೇವಾಲಯವು ಇಲ್ಲಿನ ಶಿಲ್ಪಿ ಕಲೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಕಂಬಗಳು ಸಂಗೀತ ಕಂಬಗಳಾಗಿದ್ದು ಬಡಿದರೆ ಸಂಗೀತ ಹೊರಹೊಮ್ಮುತ್ತವೆ.
ರಾಮನ ಜೀವನ ಚರಿತ್ರೆಯನ್ನು ಹೇಳುವ ದೊಡ್ಡ ದೊಡ್ಡ ರಚನೆಗಳನ್ನು ಇಲ್ಲಿ ಕಾಣಬಹುದು.ತಿರುಮಲೈ ನಾಯ್ಕರ್ ಇಂದ ಈ ದೇವಾಲಯವನ್ನು ಕಟ್ಟಲಾಯಿತು. ಈ ದೇವಸ್ಥಾನವನ್ನು ಭೇಟಿ ನೀಡಿದರೆ ಅದು ಅಯೋಧ್ಯೆಗೆ ಭೇಟಿ ನೀಡಿದಕ್ಕೆ ಸಮ ಎನ್ನಲಾಗಿದೆ. ಆಧಾರದ ಪ್ರಕಾರ, ಈ ದೇವಸ್ಥಾನವು ರಾಮ ಲಕ್ಷ್ಮಣ ಮತ್ತು ವಾನರ ಸೇನೆಯು ಸೀತೆಯನ್ನು ಉಳಿಸಿಕೊಳ್ಳಲು ರಾವಣನೊಡನೆ ಹೋರಾಡಿ ಹಿಂತಿರುಗುವಾಗ ವಿಶ್ರಾಂತಿ ಪಡೆದ ಸ್ಥಳ ಎನ್ನಲಾಗಿದೆ.
ಅಯೋಧ್ಯೆ ಗೆ ಸಮಯಕ್ಕೆ ಸರಿಯಾಗಿ ತಲುಪಲಾಗದ್ದರಿಂದ ರಾಮನ ಪಟ್ಟಾಭಿಷೇಕ ಇಲ್ಲಿ ಮಾಡಲಾಯಿತು ಎನ್ನಲಾಗಿದೆ . ಈ ದೇವಾಲಯದಲ್ಲಿ ರಾಮನ ನವಮಿ ಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದೇವಾಲಯದಲ್ಲಿ ಪ್ರಾರ್ಥಿಸಿ ಪೂಜಿಸಿದರೆ ಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.