ಇದು ಮತ್ತೊಂದು ಧಾರ್ಮಿಕ ಕೇಂದ್ರವಾಗಿದ್ದು ಹಿಂದೂ ಮತ್ತು ಮುಸ್ಲಿಂರು ಇಲ್ಲಿ ಪಾರ್ಥನೆ ಸಲ್ಲಿಸುತ್ತಾರೆ. ಇಲ್ಲಿ ಬಾಬಾ ಶ್ರೀಲಾಲ್ ದಾಸ್ ಅವರನ್ನು ಸ್ತುತಿಸಲಾಗುವುದು, ಅವರು ಖ್ಯಾತ ಸನ್ಯಾಸಿಯಾಗಿದ್ದು ಮೊಘಲರ ಕಾಲದಲ್ಲಿ ಆಧ್ಯಾತ್ಮಿಕತೆಯಲ್ಲಿ ತೊಡಗಿದ್ದರು ಎನ್ನುವುದು ನಂಬಿಕೆ. ಅವರ ಆಧ್ಯಾತ್ಮಕ ಶಕ್ತಿಯ ಪ್ರಭಾವದಿಂದ ಮೊಘಲರ ರಾಜ ದಾರಾ ಶಿಕೋ ಭಾರತೀಯ ಸಂಸ್ಕೃತಿಯನ್ನು ಒಪ್ಪಿಕೊಂಡ. ಅವರು ಧ್ಯಾನ ಮಾಡುತ್ತಿದ್ದ ಜಾಗದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ.