ಕಿರಾತಪುರ ಸಾಹಿಬ್, ಇದರ ಶ್ರೀಮಂತ ಇತಿಹಾಸ ಮತ್ತು ಪವಿತ್ರ ಗುರುದ್ವಾರಗಳಿಗೆ ಹೆಸರುವಾಸಿಯಾದ ಪಟ್ಟಣ. ಗುರುದ್ವಾರ ಪಾತಾಳಪುರಿಯಲ್ಲಿ ಸಿಖರು ಚಿತಾಭಸ್ಮವನ್ನು ಮುಳುಗಿಸುತ್ತಾರೆ. ಇದು ಈ ಪಟ್ಟಣದ ಮುಖ್ಯ ಸ್ಥಳವಾದಿದೆ.
ಇದನ್ನು ಸಿಖರ 6ನೇ ಗುರುವಾದ ಗುರು ಹರಗೋಬಿಂದ ಸಾಹಿಬಜಿಯವರು 1627ನೇ ಇಸವಿಯಲ್ಲಿ ಸ್ಥಾಪಿಸಿದರು. ಇದು ಗುರು ಹರ ರಾಯ್ ಮತ್ತು ಗುರು ಹರ ಕ್ರಿಶನ್ ನ ಹುಟ್ಟೂರು ಸಹ ಆಗಿದೆ. ಗುರು ಶ್ರೀ ತೇಗ ಬಹದ್ದೂರ್ ರ ಗುರುವಾದ ಒಂಭತ್ತನೇ ಗುರುವಿಗೆ ಮುಘಲ್ ದೊರೆ ಔರಂಗಜೇಬ್ ದಿಲ್ಲಿಯಲ್ಲಿ ಮರಣದಂಡನೆ ವಿಧಿಸಿದ ಮೇಲೆ ಇಲ್ಲಿಗೆ ಕರೆತರಲಾಯಿತು. ಈ ಸ್ಥಳದಲ್ಲಿ ಬಾಬನ್ ಗರ ಸಾಹಿಬ ಎಂಬ ಗುರುದ್ವಾರವನನ್ನು ಕಟ್ಟಿಸಲಾಯಿತು. ಪಿರ್ ಬುಡನ್ ಷಾಹ ಸುಮಾರು (ದಂತಕತೆಯ ಪ್ರಕಾರ) 800 ವರ್ಷಗಳ ಸುಧೀರ್ಘ ಆಯುಷ್ಯವನ್ನು ಹೊಂದಿದ್ದ ಮುಸ್ಲಿಮ್ ಸಂತನು ಈ ಪಟ್ಟಣಕ್ಕೆ ಸೇರಿದವರು ಎಂದು ಹೇಳಲಾಗಿದೆ.
ಗುರುದ್ವಾರಗಳ ಜೊತೆಗೆ, ಈ ಸ್ಥಳದಲ್ಲಿ ಅನೇಕ ಪ್ರಸಿದ್ಧ ಮಂದಿರಗಳು ಹಾಗು ದರ್ಗಾಗಳಿವೆ. ರೂಪನಗರದಿಂದ ಉತ್ತರಕ್ಕೆ ಸುಮಾರು 34 ಕಿ.ಮಿ ದೂರದಲ್ಲಿ ನಂಗಲ್-ರೂಪನಗರ್-ಚಂದಿಗಡ ರಸ್ತೆಯ (ರಾಷ್ಟ್ರೀಯ ಹೆದ್ದಾರಿ 21)ಮೇಲಿದೆ.