ಪುರಾತತ್ವ ಶಾಸ್ತ್ರದ ಸಂಗ್ರಹಾಲಯವನ್ನು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ 1998ರಲ್ಲಿ, ಸ್ಮಾತಂತ್ರ್ಯ ಬಂದ ನಂತರ ರೂಪನಗರದ ಬಳಿ ಮೊದಲನೆಯ ಬಾರಿ ಹರಪ್ಪನ ಸ್ಥಳದಲ್ಲಿ ನಡೆಸಿದ ಸಂಶೋಧನ ಕಾರ್ಯದಲ್ಲಿ ದೊರೆತ ವಸ್ತುಗಳ ಪ್ರದರ್ಶನಕ್ಕೆ ಸ್ಥಾಪಿಸಿತು. ಹಲವು ಪ್ರಾಚೀನ ಕಲಾ ವಸ್ತುಗಳಾದ ವೀಣಾವಾದಿನಿ, ಚಂದ್ರಗುಪ್ತ ಕಾಲದ ಬಂಗಾರದ ನಾಣ್ಯಗಳು ಮುಂತಾದವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನು ಹೊರತುಪಡಿಸಿ ಪ್ರವಾಸಿಗರಿಗೆ ಪಂಜಾಬ್, ಹರಿಯಾಣ ಮತ್ತು ಹಿಮಾಚಲಪ್ರದೇಶಕ್ಕೆ ಸಂಬಂಧಪಟ್ಟ ಸಂರಕ್ಷಿಸಿದ ಸ್ಮಾರಕಗಳು ಮತ್ತು ವಿಶ್ವ ಪರಂಪರೆಯ ಸ್ಮಾರಕಗಳು ಕಾಣ ಸಿಗುತ್ತವೆ.