ತುಂಗಾನಾಥ್, ಸಮುದ್ರ ಮಟ್ಟದಿಂದ 3680 ಮೀಟರ್ ಎತ್ತರದಲ್ಲಿ, ಚಂದ್ರಶಿಲಾ ಶಿಖರದ ಮೇಲೆ ನೆಲೆ ನಿಂತಿರುವ ಪ್ರಮುಖ ಪವಿತ್ರ ಸ್ಥಳವಾಗಿದೆ. ಇದನ್ನು 'ಪಂಚ ಕೇದಾರ್’ ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಸ್ಥಳವು ಹಿಂದೂ ದೇವರು ಶಿವನನ್ನು ಪೂಜಿಸುವ ಅತೀ ಹೆಚ್ಚಿನ ಅತ್ಯುನ್ನತ ದೇವಾಲಯಗಳನ್ನು ಹೊಂದಿದೆ. ಹಿಂದೂ ಪುರಾಣದ ಪ್ರಕಾರ, ನಂದಿ ರೂಪದಲ್ಲಿದ್ದ ಶಿವನು ಐದು ವಿವಿಧ ಸ್ಥಳಗಳಲ್ಲಿ ಕಂಡುಬಂದನು ಅದರಲ್ಲಿ ಶಿವನ ಕೈ ಈ ಸ್ಥಳದಲ್ಲಿ ಕಂಡುಬಂದಿತು. ಈ ದೇವಾಲಯದಲ್ಲಿ ಒಂದು ಶಿವಲಿಂಗದ ಜೊತೆಗೆ 2.5 ಅಡಿ ಎತ್ತರದ ಆದಿ ಗುರು ಶಂಕರಾಚಾರ್ಯರ ಒಂದು ಪ್ರತಿಮೆಯನ್ನು ಕಾಣಬಹುದು. ಈ ಸ್ಥಳವು ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಶಿಖರಗಳ ಸೌಮ್ಯ ವೀಕ್ಷಣೆಗಳನ್ನು ಒದಗಿಸುತ್ತದೆ. ನಂದಾದೇವಿ ದೇವಾಲಯ ಮತ್ತು ಆಕಾಶ ಗಂಗಾ ಜಲಪಾತ ಇದರ ಬಳಿಯಿರುವ ಹತ್ತಿರದ ಪ್ರವಾಸಿ ತಾಣಗಳಾಗಿವೆ. ಚೊಪ್ತಾ, ಈ ದೇವಸ್ಥಾನ ತಲುಪಲು ಹತ್ತಿರದ ರಸ್ತೆ ಮಾರ್ಗವಾಗಿದೆ.