ತ್ರಿಯುಗಿನಾರಾಯಣ, ರುದ್ರಪ್ರಯಾಗದಲ್ಲಿರುವ, ಭೇಟಿ ನೀಡಬಹುದಾದಂತಹ ಒಂದು ಪವಿತ್ರ ಸ್ಥಳ. ನಂಬಿಕೆಗಳ ಪ್ರಕಾರ, ಇದು ಹಿಂದೂ ದೇವರು ಶಿವನು ಈ ಸ್ಥಳದಲ್ಲಿ ಸತ್ಯಯುಗದಲ್ಲಿ ಪಾರ್ವತಿಯೊಂದಿಗೆ ವಿವಾಹವಾಗಿದ್ದನು ಹಾಗೂ ಈ ಸ್ಥಳವು ಹಿಮಾವತ್ ಪ್ರದೇಶದ ರಾಜಧಾನಿಯಾಗಿತ್ತು. ಇನ್ನೊಂದು ಕುತೂಹಲಕಾರಿಯಾದ ವಿಷಯವೆಂದರೆ ಶಿವ ಪಾರ್ವತಿಯರ ಮದುವೆಯಲ್ಲಿ ಬಳಸಲಾಗಿದ್ದ ಅಗ್ನಿ/ಹವನ ಕುಂಡ ಈಗಲೂ ಇಲ್ಲಿ ಉರಿಯುತ್ತಿದೆ! ಈ ಹವನ ಕುಂಡದ ಭಸ್ಮವನ್ನು ಹಚ್ಚಿಕೊಂಡರೆ ದೇವರೆ ವೈವಾಹಿಕ ಜಿವನಕ್ಕೆ ಹರಸುತ್ತಾರೆ ಎಂದು ಭಕ್ತರು ನಂಬುತ್ತಾರೆ.
ಈ ಪವಿತ್ರ ಸ್ಥಳದಲ್ಲಿ ವಿಷ್ಣು ದೇವಾಲಯವನ್ನೂ ಕಾಣಬಹುದು. ಇದು ಕೇದಾರನಾಥ ದೇವಾಲಯವನ್ನು ಹೋಲುವಂತಹ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರು ರುದ್ರಕುಂಡ, ವಿಷ್ಣು ಕುಂಡ ಹಾಗೂ ಬ್ರಹ್ಮ ಕುಂಡವನ್ನು ಭೇಟಿ ಮಾಡಬಹುದು. ಸರಸ್ವತಿ ಕುಂಡ ಈ ಮೂರು ಕುಂಡಗಳ ಮೂಲವಾಗಿದೆ. ಒಂದು ನಂಬಿಕೆಗಳ ಪ್ರಕಾರ, ಈ ಕುಂಡದ ನೀರು ಭಗವಾನ್ ವಿಷ್ಣುವಿನ ನೌಕೆಯಿಂದ ಹೊರಬರುತ್ತದೆ. ಈ ಸ್ಥಳವು ಮಹಿಳೆಯರ ಬಂಜೆತನವನ್ನು ನಿವಾರಿಸುವುದಕ್ಕೆ ಹೆಸರುವಾಸಿಯಾಗಿದೆ.