ಕಾರ್ತಿಕ ಸ್ವಾಮಿ, ರುದ್ರಪ್ರಯಾಗ ಜಿಲ್ಲೆಯ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದು ರುದ್ರಪ್ರಯಾಗ ಪಟ್ಟಣದಿಂದ 38 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಹಿಂದೂ ದೇವರು ಶಿವನ ಪುತ್ರ ಕಾರ್ತಿಕೇಯನ ದೇವಾಲಯವನ್ನು ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು 3048 ಮೀಟರ್ ಎತ್ತರದಲ್ಲಿರುವ ಈ ಸ್ಥಳ ಬೃಹತ್ ಹಿಮಾಲಯ ಶ್ರೇಣಿಗಳಿಂದ ಸುತ್ತುವರೆದಿದೆ. ಪುರಾಣದ ಪ್ರಕಾರ, ಒಮ್ಮೆ ಶಿವನು, ಬ್ರಹ್ಮಾಂಡವನ್ನು ಸುತ್ತಿ ಬರಲು ತನ್ನ ಎರಡು ಮಕ್ಕಳಿಗೆ ಹೇಳಿದ ಮತ್ತು ವಿಜೇತರಾದವರಿಗೆ ಪೋಷಕರನ್ನು ಪೂಜಿಸಲು ಮೊದಲ ಅವಕಾಶ ದೊರೆಯುತ್ತದೆಂದು ಘೋಷಿಸುತ್ತಾನೆ.
ಆ ಇಬ್ಬರು ಪುತ್ರರಲ್ಲಿ ಭಗವಾನ್ ಗಣೇಶನು, ಬ್ರಹ್ಮಾಂಡವೆ ತನ್ನ ಪೋಷಕರ ಅಂಶವಾಗಿರುವುದರಿಂದ ಅವರನ್ನೆ ಸುತ್ತಿ ವಿಜಯಿಯಾಗುತ್ತಾನೆ. ಇದರಿಂದ ಕೋಪಗೊಂಡ ಇನ್ನೊರ್ವ ಪುತ್ರ ಕಾರ್ತಿಕೇಯನು ತನ್ನ ತಂದೆಗೆ ತನ್ನ ಮೂಳೆಗಳು ಮತ್ತು ತಾಯಿಗೆ ತನ್ನ ದೇಹದ ಮಾಂಸವನ್ನು ಸಮರ್ಪಿಸುತ್ತಾನೆ. ಈ ಮೂಳೆಗಳು ಇನ್ನೂ ಈ ದೇವಾಲಯದಲ್ಲಿದ್ದು ಹಲವಾರು ಭಕ್ತರಿಂದ ಪೂಜಿಸಲ್ಪಡುತ್ತವೆ. ರುದ್ರಪ್ರಯಾಗ-ಪೊಖ್ರಿ ಮಾರ್ಗದಲ್ಲಿ ನೆಲೆಗೊಂಡಿರುವ ಈ ಸ್ಥಳಕ್ಕೆ ಕನಕ ಚೌರಿ ಹಳ್ಳಿಯಿಂದ 3 ಕಿ. ಮೀ ಚಾರಣದ ಮೂಲಕ ತಲುಪಬಹುದು.