ರುದ್ರನಾಥ ದೇವಾಲಯ ಸಮುದ್ರ ಮಟ್ಟದಿಂದ 2286 ಮೀಟರ್ ಎತ್ತರದಲ್ಲಿದ್ದು ರುದ್ರನಾಥ ಪ್ರದೇಶದಲ್ಲಿದೆ. ರುದ್ರನಾಥ ದೇವಾಲಯದಲ್ಲಿ ನೀಲ ಕಂಠ ಮಹಾದೇವ ಎಂಬ ಹೆಸರಿನಲ್ಲಿ ಹಿಂದೂ ದೇವ ಶಿನನನ್ನು ಇಲ್ಲಿ ಪೂಜಿಸಲಾಗುತ್ತದೆ. ನಂಬಿಕೆಗಳ ಪ್ರಕಾರ, ಈ ದೇವಾಲಯವನ್ನು ಭಾರತೀಯ ಮಹಾಕಾವ್ಯ, ಮಹಾಭಾರತದ ಪೌರಾಣಿಕ ಪಾತ್ರಗಳಾದ ಪಾಂಡವರಿಂದ ನಿರ್ಮಿಸಲಾಗಿದೆ.
ಕಥೆಯ ಸಾರಾಂಶವೆಂದರೆ, ಪಾಂಡವರು ಮಹಾಭಾರತ ಯುದ್ಧದಲ್ಲಿ ಕೌರವರನ್ನು ಕೊಂದ ತಪ್ಪಿತಸ್ಥ ಭಾವನೆಯಿಂದ ಭಗವಾನ್ ಶಿವನಲ್ಲಿ ಕ್ಷಮೆ ಕೇಳಲು ಹೋದರು. ಆದರೆ ಶಿವ ಅವರನ್ನು ನೋಡಲು ಬಯಸದೇ ತಾನೇ ಸ್ವತಃ ನಂದಿ (ಹೋರಿ) ಆಗಿ ರೂಪಾಂತರಗೊಂಡು ಅಡಗಿಕೊಳ್ಳುತ್ತಾನೆ. ಗುಪ್ತಕಾಶಿಯಲ್ಲಿ, ಪಾಂಡವರು ನಂದಿಯನ್ನು ಕಂಡು ಬಲವಂತವಾಗಿ ಅದನ್ನು ತಡೆಯಲು ಪ್ರಯತ್ನಿಸಿದರು ಆದರೆ ಅದು ವ್ಯರ್ಥವಾಯಿತು. ಇದಾದ ನಂತರ, ಶಿವನ ದೇಹದ ಭಾಗಗಳು ಪಂಚ ಕೇದಾರ ಎಂದು ಕರೆಯಲ್ಪಡುವ ಗಡ್ವಾಲ್ ಪ್ರದೇಶದಲ್ಲಿ ಕಂಡುಬಂದವು. ಶಿವನ ಮುಖವನ್ನು ಕಂಡ ಸ್ಥಳದಲ್ಲಿ ರುದ್ರನಾಥ ದೇವಾಲಯವನ್ನು ಕಟ್ಟಲಾಗಿದೆ.
ಪ್ರವಾಸಿಗರು ಸಾಗರ ಗ್ರಾಮ ಮತ್ತು ಜೋಶಿಮಠ್ ಮೂಲಕ ಈ ದೇವಸ್ಥಾನ ತಲುಪಬಹುದು. ಜೋಶಿಮಠ ಮಾರ್ಗದ ಉದ್ದ 45 ಕಿ. ಮಿಗಳು ಮಾತ್ರ. ಹಥಿ ಪರ್ವತ, ನಂದಾ ದೇವಿ, ನಂದ ಘುಂಟಿ ಮತ್ತು ತ್ರಿಶೂಲ್ ಮೊದಲಾದ ಸುಂದರ ಶಿಖರಗಳನ್ನು ಈ ದೇವಾಲಯದ ಸುತ್ತ ನೋಡಬಹುದು. ಪವಿತ್ರ ನೀರಿನ ಕುಂಡಗಳಾದ ಸೂರ್ಯ ಕುಂಡ, ಚಂದ್ರ ಕುಂಡ, ತಾರಾ ಕುಂಡ ಮತ್ತು ಮನಾ ಕುಂಡ ಮೊದಲಾದವುಗಳು ಈ ದೇವಾಲಯದ ಭಾಗಗಳಲ್ಲಿ ಕಾಣಬಹುದು.