ರಿಷಿಕೇಶದಿಂದ 16 ಕಿ.ಮೀ ದೂರದಲ್ಲಿರುವ ವಸಿಷ್ಠ ಗುಹೆಯು ಗಂಗಾ ನದಿಯ ದಡದ ಮೇಲೆ ಸ್ಥಿತಗೊಂಡಿದೆ. ಈ ಸ್ಥಳವು ಧ್ಯಾನ ಮಾಡಲು ಅತ್ಯಂತ ಸೂಕ್ತವಾಗಿದ್ದು, ಫಿಕಸ್ (ಗುಲಾರ್)ಮರಗಳಿಂದ ಸುತ್ತುವರೆದಿದೆ. ಗುಹೆಯ ಹತ್ತಿರದಲ್ಲಿ ಒಂದು ಶಿವಲಿಂಗವಿದ್ದು ಹಿಂದು ಸಮುದಾಯದ ಭಕ್ತರ ಪಾಲಿಗೆ ಅದು ಪವಿತ್ರವಾಗಿದೆ.
ಪ್ರಖ್ಯಾತ ಹಿಂದು ಋಷಿಗಳಾದ ಶ್ರೀ ಪುರುಷೊತ್ತಮಾನಂದರವರು ಈ ಸ್ಥಳಕ್ಕೆ 1928 ಮತ್ತು 1961 ರಲ್ಲಿ ಭೇಟಿ ನೀಡಿದ್ದರು. ಅವರ ಆಶ್ರಮವು ಈ ಗುಹೆಯ ಬಳಿಯಲ್ಲೆ ಇದ್ದು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.