ಶ್ರೀರಾಮನ ತಮ್ಮ ಲಕ್ಷ್ಮಣನಿಗೆ ಇಲ್ಲಿ ಪೂಜೆ ನಡೆಯುತ್ತದೆ. ಗಂಗಾ ನದಿಯ ಬಲ ದಂಡೆಯ ಮೇಲೆ ಈ ದೇವಸ್ಥಾನವಿದ್ದು 5 ಕಿಲೋ ಮೀಟರ್ ದೂರದಲ್ಲಿದೆ. ದೇವಸ್ಥಾನದ ಗೋಡೆಗಳ ಮೇಲೆ ಬಣ್ಣದ ಚಿತ್ರಗಳಿವೆ. ಭಾರತದಲ್ಲಿ ಕಾಣಸಿಗುವ ಅಪರೂಪದ ಲಕ್ಷ್ಮಣನ ದೇವಸ್ಥಾನಗಳಲ್ಲಿ ಇದೂ ಒಂದು. ಈ ದೇವಸ್ಥಾನದ ಗೋಡೆಗಳ ಮೇಲೆ ಹಲವಾರು ಕೆತ್ತನೆಗಳು ಮತ್ತು ವರ್ಣಚಿತ್ರಗಳಿದ್ದು, ಹಲವು ಪ್ರಸಿದ್ಧ ಕಥಾ ದೃಶ್ಯಗಳನ್ನು ಪ್ರತಿಬಿಂಬಿಸುತ್ತವೆ. ಒಂದು ದಂತಕಥೆಯ ಪ್ರಕಾರ, ಒಮ್ಮೆ ಲಕ್ಷ್ಮಣನು ಆಧ್ಯಾತ್ಮಿಕ ಚೈತನ್ಯವನ್ನು ಪಡೆಯುವುದಕ್ಕೆ ಇಲ್ಲಿ ಧ್ಯಾನ ಮಾಡಿದ್ದನು.
ನಂಬಿಕೆಗಳ ಪ್ರಕಾರ, ರಾಮ ಮತ್ತು ಲಕ್ಷ್ಮಣರು ಹಿಮಾಲಯಕ್ಕೆ ಹೋಗುವಾಗ ಗಂಗಾ ನದಿಯ ಮೇಲೆ ಕಟ್ಟಿಗೆಯ ಬೃಹತ್ ಸೇತುವೆಯನ್ನು ನಿರ್ಮಾಣ ಮಾಡಿದ್ದರು. ಪ್ರಸ್ತುತ ಈ ಸೇತುವೆಯು ಲಕ್ಷ್ಮಣ ಝೂಲಾ ಎಂದು ಪ್ರಖ್ಯಾತವಾಗಿದೆ. ಈ ದೇವಸ್ಥಾನದಲ್ಲಿರುವ ರಿಷಿಕುಂಡವು ಒಂದು ಪ್ರಮುಖ ಆಕರ್ಷಣೆ. ಮತ್ತೊಂದು ಕಥೆಯ ಪ್ರಕಾರ ರಾಮ ಮತ್ತು ಲಕ್ಷ್ಮಣರು ರಾವಣನನ್ನು ಸಂಹರಿಸಿದ ಬಳಿಕ ಕಟ್ಟಿಕೊಂಡ ಹತ್ಯಾ ದೋಷವನ್ನು ಈ ರಿಷಿಕುಂಡದಲ್ಲಿ ಸ್ನಾನ ಮಾಡುವ ಮೂಲಕ ನಿವಾರಿಸಿಕೊಂಡರು.