ರೆವಾರಿ ಎಂಬುದು ಹರ್ಯಾಣದ ರೆವಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ದೆಹಲಿಯಿಂದ 82 ಕಿ ಮೀ ಅಂತರದಲ್ಲಿರುವ ಇದು ರಾಷ್ಟ್ರೀಯ ರಾಜಧಾನಿ ಪ್ರದೇಶದ ಒಂದು ಭಾಗ. ಭಾರತದ ಕೊನೆಯ ಚಕ್ರವರ್ತಿ ಹೇಮು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಈ ರೆವಾರಿನಲ್ಲಿ ಎಂಬ ಇತಿಹಾಸವಿದೆ. ಹೇಮು ಚಕ್ರವರ್ತಿಯ ಹವೇಲಿ ಇನ್ನೂ ಕುತುಬ್ಪುರದ ಪ್ರದೇಶದಲ್ಲಿ ನಿಂತಿದೆ. ಈತನ ಕಾಲದಲ್ಲಿ ಈ ಸಾಮ್ರಾಜ್ಯದಲ್ಲಿ ಲೋಹದ ಕೈಗಾರಿಕೆಯಾದ ತಾಮ್ರದ ತಗಡುಗಳು, ಪಾತ್ರೆ, ಹಿತ್ತಾಳೆಯ ತಯಾರಿ ಮಾಡಲಾಗುತ್ತಿತ್ತು. ಇವು ಇಂದಿಗೂ ಕೂಡ ಹೆಸರುವಾಸಿಯಾಗಿವೆ. ರೆವಾರಿಯು ಹರ್ಯಾಣದ ಗುರುಗಾಂವ್ ಜಿಲ್ಲೆಯ ಭಾಗವಾಗಿತ್ತು. ನಂತರ 1989 ರವರೆಗೆ ಮಹೇಂದ್ರಗಡದ ಭಾಗವಾಗಿತ್ತು,ನಂತರ ಸ್ವತಂತ್ರ ಜಿಲ್ಲೆಯಾಯಿತು.
ರೆವಾರಿಯ ಸುತ್ತಮುತ್ತಲ ಪ್ರವಾಸಿ ತಾಣಗಳು
ರೆವಾರಿಯ ಮುಖ್ಯ ಆಕರ್ಷಣೆ ಎಂದರೆ ಹೆರಿಟೇಜ್ ಉಗಿಬಂಡಿ ಸಂಗ್ರಹಾಲಯ. ಈ ಸಂಗ್ರಹಾಲಯದ ಮಾಳಿಗೆಯನ್ನು 1893 ರಲ್ಲಿ ಪ್ರಾರಂಭಿಸಲಾಯಿತು ಮತ್ತು ತಮ್ಮ ಶ್ರಮದಾಯಕ ಕಣ್ಣೀರಿನ ಉಗಿ ಯಂತ್ರಗಳ ಬಗ್ಗೆ ತಿಳಿಸಲು ಭಾರತದಲ್ಲಿ ಇರುವ ಏಕೈಕ ಸಂಗ್ರಹಾಲಯ ಇದಾಗಿದೆ. 1990ರಲ್ಲಿ ಈ ಉಗಿಬಂಡಿಯನ್ನು ಸಕ್ರಿಯ ಸೇವೆಯಿಂದ ತೆಗೆದ ನಂತರ ಇದು ನಿರ್ಲಕ್ಷಕ್ಕೆ ಒಳಗಾಯಿತು. ನಂತರ ಡಿಸೆಂಬರ್ 2002 ರಲ್ಲಿ ಇದನ್ನು ಉಗಿ ಯಂತ್ರಗಳ ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು.
ರೆವಾರಿ ಹವಾಮಾನ
ರೆವಾರಿ ಒಣ ಮತ್ತು ಅರೆ ಶುಷ್ಕ ವಾತಾವರಣವನ್ನು ಹೊಂದಿದೆ. ಇಲ್ಲಿ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲ ಎಂಬ 3 ಕಾಲವನ್ನು ಕಾಣಬಹುದು.
ರೆವಾರಿ ತಲುಪುವುದು ಹೇಗೆ?
ರೆವಾರಿ ಭಾರತದ ಪ್ರಮುಖ ನಗರಗಳಿಂದ ರೈಲು, ರಸ್ತೆ ಮತ್ತು ವಾಯು ಮಾರ್ಗದ ಸಂಪರ್ಕವನ್ನು ಹೊಂದಿದೆ. ಜೊತೆಗೆ ಇದು ಮುಖ್ಯ ರೈಲ್ವೆ ಜಂಕ್ಷನ್ ಅನ್ನು ಕೂಡ ಹೊಂದಿದೆ.