ಇಲ್ಲಿನ ಸಮೀಪದಲ್ಲಿರುವ ಊರಾದ ಜೋನ್ಹಾದಿಂದ ಗುರುತಿಸಲ್ಪಡುವ ಈ ಜಲಪಾತವನ್ನು ಗೌತಮ್ ಧಾರಾ ಎಂದು ಸಹ ಕರೆಯುತ್ತಾರೆ. ನಂಬಿಕೆಗಳ ಪ್ರಕಾರ ಇಲ್ಲಿ ಬುದ್ಧ ಭಗವಾನ್ ಸ್ನಾನಮಾಡಿದ್ದನಂತೆ. ರಾಜಾ ಬಲ್ದೇವ್ದಾಸ್ ಬಿರ್ಲಾರವರ ಮಕ್ಕಳು ಇಲ್ಲಿನ ಗೌತಮ್ ಪಹರ್ ಮೇಲೆ ಒಂದು ಬುದ್ಧನ ದೇವಾಲಯವನ್ನು ಸಹ ನಿರ್ಮಿಸಿದ್ದಾರೆ. ಇಲ್ಲಿ ಪ್ರತಿ ಮಂಗಳವಾರ ಮತ್ತು ಗುರುವಾರಗಳು ನಡೆಯುವ ಸಂತೆಯು ಪ್ರವಾಸಿಗರ ವಲಯದಲ್ಲಿ ಭಾರೀ ಜನಪ್ರಿಯಗೊಂಡಿದೆ. ಇಲ್ಲಿನ ಆಶ್ರಮವು ಮೂಲತಃ ಹಿಂದೂ ಧರ್ಮೀಯರಿಗೆ ಮಾತ್ರ ಮೀಸಲಾಗಿದೆ. ಅದರಲ್ಲಿ ಆರ್ಯ ಧರ್ಮದಲ್ಲಿ ಹೆಚ್ಚಿನ ಶ್ರದ್ಧೆಯನ್ನು ಹೊಂದಿದ್ದು, ಅದರ ಶಾಖೆಗಳಿಗೆ ಮಹತ್ವವನ್ನು ನೀಡಿದೆ( ಬೌದ್ಧರು, ಜೈನರು, ಸಿಖ್ಖರು, ಸನಾತನಿ, ಆರ್ಯಸಮಾಜಿಕರು).
ಇಲ್ಲಿನ ಸ್ಥಳೀಯರು ಇದನ್ನು ಗುಂಗಾನಾಲಾ ಎಂದು ಕರೆಯುತ್ತಾರೆ. ಏಕೆಂದರೆ ಈ ಹೊಳೆಯು ಗಂಗಾ ಘಾಟ್ನಿಂದ ಬರುತ್ತದೆ. 453 ಮೆಟ್ಟಿಲುಗಳನ್ನು ಇಳಿದರೆ ನೀವು ಈ ಜಲಪಾತವನ್ನು ತಲುಪಬಹುದು. ಇದು ಕೊನಾರ್ದಿಹ್ ಮತ್ತು ದುವಾರ್ಸಿನಿ ಹಳ್ಳಿಗಳಿಂದ ಸ್ವಲ್ಪದೂರದಲ್ಲಿದೆ. ಈ ಜಲಪಾತವು ರಾಂಚಿ ಭೂಭಾಗದ ತುತ್ತ ತುದಿಯಲ್ಲಿದೆ. ಅಲ್ಲದೇ ಇದು ಗಂಗಾ ಮತ್ತು ರಾರು ನದಿಗಳಿಂದ ನೀರನ್ನು ಪಡೆದು 43 ಮೀಟರ್ ಎತ್ತರದಿಂದ ಧುಮುಕುತ್ತದೆ. ಇಲ್ಲಿನ ಸುತ್ತಮುತ್ತಲ ಪರಿಸರವನ್ನು ನೋಡಲು 500 ಮೆಟ್ಟಿಲು ಏರಬೇಕಾಗುತ್ತದೆ.