ಸದ್ರಿಯು ರಾಜಸ್ಥಾನದ ಪಾಲಿ ಜಿಲ್ಲೆಯ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಹಿಂದೆ ಈ ನಗರವು ’ಮೇವಾಡದಿಂದ ಮಾರವಾಡಕ್ಕೆ ಇರುವ ಹೆಬ್ಬಾಗಿಲು’ ಎಂದು ಕರೆಯಲ್ಪಡುತ್ತಿತ್ತು. ಈ ಸ್ಥಳವು ಧಾರ್ಮಿಕ ಕಾರಣಗಳಿಗಾಗಿ ಜೈನ ಸಮುದಾಯದವರಿಗೆ ಮಹತ್ವದ ತಾಣವಾಗಿದೆ. ರಣಕ್ಪುರದ ದೇವಾಲಯ ಮತ್ತು ಶ್ರೀ ಪರಶುರಾಮ್ ಮಹಾದೇವ್ ಮಂದಿರಗಳಿಗೆ ಭೇಟಿಕೊಡಲು ಹೋಗುವ ಪ್ರವಾಸಿಗರಿಗೆ ಈ ಸ್ಥಳವು ಮೂಲ ನೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಸ್ಥಳದಲ್ಲಿರುವ ದೇವಾಲಯಗಳೊಂದಿಗೆ ಇಲ್ಲಿರುವ ವರಹಾವತಾರ್ ದೇವಾಲಯ ಮತ್ತು ಚಿಂತಾಮಣಿ ಪಾರ್ಶ್ವನಾಥ್ ದೇವಾಲಯ ಹಾಗು ಹಳೆಯದಾದ ಖುದಾಬಕ್ಷ್ ಬಾಬಾ ದರ್ಗಾವು ಇಲ್ಲಿನ ಪ್ರಸಿದ್ಧ ಆಕರ್ಷಣೆಗಳಲ್ಲಿ ಸ್ಥಾನ ಪಡೆದಿವೆ.