ಐದು ಮುಖದ ಹನುಮಾನ್ ದೇವಾಲಯ ಬಹುಶಃ ಶ್ರೀ ರಾಮನಾಥಸ್ವಾಮಿ ದೇವಸ್ಥಾನ ನಂತರ ರಾಮೇಶ್ವರದ ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ರಾಮ, ಆತನ ಪತ್ನಿ ಸೀತೆ ಮತ್ತು ಹನುಮಾನ್ ವಿಗ್ರಹಗಳನ್ನು ದೇವಾಲಯದಲ್ಲಿ ಸ್ಥಾಪನೆ ಮಾಡಲಾಗಿದೆ. ಈ ವಿಗ್ರಹಗಳನ್ನು ಧನುಷ್ಕೋಡಿ ಗ್ರಾಮವನ್ನೇ ನಾಶಪಡಿಸಿದ 1964 ಚಂಡಮಾರುತದ ಸಮಯದಲ್ಲಿ ಧನುಷ್ಕೋಡಿ ದೇವಸ್ಥಾನದಿಂದ ಇಲ್ಲಿಗೆ ತರಲಾಯಿತು.
ಕುತೂಹಲಕಾರಿ ವಿಷಯವೆಂದರೆ, ದೇವರ ಆತ್ಮಗಳು ಈ ವಿಗ್ರಹಗಳ ಒಳಗೆ ಇದೆ ಎಂದು ನಂಬಲಾಗಿದೆ. ಈ ದೇವಾಲಯವನ್ನು ವೀಕ್ಷಿಸಲು ಆಗಾಗ್ಗೆ ದೇಶದ ಎಲ್ಲೆಡೆಗಳಿಂದ ಭಕ್ತರು ಆಗಮಿಸುತ್ತಿರುತ್ತಾರೆ.
ದೇವಸ್ಥಾನದ ಮತ್ತೊಂದು ಆಸಕ್ತಿದಾಯಕ ವೈಶಿಷ್ಟ್ಯವೆಂದರೆ, ದೇವಾಲಯದ ಹೊರಗೆ ಬಲ ಭಾಗದಲ್ಲಿ ತೇಲುವ (ಚರ) ಕಲ್ಲನ್ನು ಕಾಣಬಹುದು. ಈ ಕಲ್ಲು, ರಾವಣ ನ ಬಿಗಿ ಹಿಡಿತದಿಂದ ಸೀತಾ ಮಾತೆಯನ್ನು ರಕ್ಷಿಸಲು ಲಂಕಾ ತಲುಪುವ ಸಲುವಾಗಿ ಹನುಮಾನ್ ಮತ್ತು ಆತನ ವಾನರ ಸೇನೆ ನಿರ್ಮಿಸಿದ ಸೇತುವೆಯ ಒಂದು ಭಾಗ ಎಂದು ನಂಬಲಾಗಿದೆ.
ದಂತಕಥೆಯ ಪ್ರಕಾರ ಇದು ಹನುಮಂತನು ತನ್ನ ಐದು ಮುಖಗಳನ್ನು ಅಥವಾ ರೂಪಗಳನ್ನು ತೋರಿಸಿದ ಸ್ಥಳ ಎನ್ನಲಾಗುತ್ತದೆ. ಅಲ್ಲದೇ ಈ ಸ್ಥಳದಲ್ಲಿಯೇ ಹನುಮಂತನಿಗೆ ರಾಮನಿಂದ ಸಿಂಧೂರ/ಕುಂಕುಮದಿಂದ ಅಲಂಕಾರ ಮಾಡಲಾಗುತ್ತು ಎಂಬ ಪ್ರತೀತಿಯೂ ಇದೆ.