ಮೊದಲಿಗೆ ಚಂಪಜಹರ ಎಂದೇ ಕರೆಸಿಕೊಳ್ಳುತ್ತಿದ್ದ ಚಂಪಾರಣ ಎಂಬ ಪಟ್ಟಣವು ರಜಿಮ್ ನಿಂದ ಸುಮಾರು 15 ಕಿ.ಮೀ ದೂರದಲ್ಲಿ ಉಪಸ್ಥಿತವಿದೆ. ವೈಷ್ಣವ ಪಂಥವನ್ನು ಹುಟ್ಟು ಹಾಕಿದ ಸಂತ ವಲ್ಲಭಾಚಾರ್ಯರ ಹುಟ್ಟೂರಾದ ಚಂಪಾರಣ ಒಂದು ಜನಪ್ರಿಯ ವೈಷ್ಣವ ಪೀಠ. ಮಂದಿರದ ಸಂಕೀರ್ಣದ ಒಳಾಂಗಣವು ಅಮೃತಶಿಲೆಯಿಂದ ಮಾಡಿದ್ದು ಸ್ಥಳದಲ್ಲಿ ಪ್ರಶಾಂತವಾದ ವಾತಾವರಣವಿದೆ. ಮಂದಿರದ ಹೊರಗಡೆ ಆಕರ್ಷಕ ಹಾಗು ರಂಗುರಂಗಿನ ಕಂಬಗಳು ಮತ್ತು ಕಮಾನುಗಳು ನೋಡುವವರ ಕಣ್ಣಿಗೆ ಹಬ್ಬವನ್ನು ಉಂಟುಮಾಡುವಂತಿದೆ. ಚಂಪಾರಣ ಮಂದಿರದ ಒಳಗಿನ ಅಂಗಳದಲ್ಲಿರುವ ಪ್ರತಿಮೆಗಳು ಸಂತನ ಜೀವನದ ಕಥೆಯನ್ನು ನಿರೂಪಿಸುತ್ತದೆ.
ಈ ಪಟ್ಟಣದಲ್ಲಿ, ಸಂತ ವಲ್ಲಭಾಚಾರ್ಯರ ಗೌರವಸೂಚಕವಾಗಿ ಒಂದು ಮಂದಿರವನ್ನು ನಿರ್ಮಿಸಲಾಗಿದೆ. ಈ ಮಂದಿರದ ಸಂಕೀರ್ಣವನ್ನು ಸುಧಾಮಪುರಿ ಎಂದು ಕರೆಯಲಾಗುತ್ತದೆ. ಬಹುತೇಕ ಗುಜರಾತಿ ಭಕ್ತರು, ಹಿಂದೂ ಪಂಚಾಂಗದ ಶ್ರಾವಣ ಮಾಸದಲ್ಲಿ ಈ ಮಂದಿರಕ್ಕೆ ಭೇಟಿ ಕೊಡುತ್ತಾರೆ.