ಸರ್ ಆರ್ಥರ್ ಕಾಟನ್ ನೆನಪಿಗಾಗಿ ನಿರ್ಮಿಸಲಾದ ವಸ್ತುಸಂಗ್ರಹಾಲಯ ಇದು. ಗೋದಾವರಿ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿದ ಇಂಜಿನಿಯರುಗಳಲ್ಲಿ ಓರ್ವನಾದ ಸರ್ ಆರ್ಥರ್ ಕಾಟನ್ ಬ್ರಿಟೀಷ್ ಮೂಲದವನು. ಭಾರತದಲ್ಲಿ ಆಣೆಕಟ್ಟುಗಳ ಮೂಲಕ ನೀರಾವರಿಗೂ ಉಪಯೋಗವಾಗುವಂಥ ವಾಸ್ತುಶಿಲ್ಪವನ್ನು ತೋರಿಸಿಕೊಟ್ಟವರು ಆರ್ಥರ್. ಪ್ರಶಾಂತವಾಗಿ ಹರಿದು ಕಡಲು ಸೇರುತ್ತಿದ್ದ ನದಿಗೆ ಆಣೆಕಟ್ಟು ಕಟ್ಟಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವುದು ಸಾಧ್ಯ ಎಂದು ಯಾರೂ ಯೋಚಿಸದೇ ಇದ್ದಾಗ ಇವರು ಆ ಬಗ್ಗೆ ಯೋಚಿಸಿದರು. ಇದೇ ಕಾರಣಕ್ಕೆ ಅವರನ್ನು ಡೆಲ್ಟಾ ವಾಸ್ತು ಶಿಲ್ಪಿ ಎಂದು ಕರೆಯಲಾಗಿದೆ. ಆರ್ಥರ್ ಕಾಟನ್ ಮ್ಯೂಸಿಯಂ ಸಿವಿಲ್ ಇಂಜಿನಿಯರಿಂಗ್ ಗೆ ಸಂಬಂಧಿಸಿದ ವಸ್ತುಗಳ ಸಂಗ್ರಹಾಲಯವಾಗಿದ್ದು ಕಟ್ಟಡ ನಿರ್ಮಾಣ ಮಾಡುವವರನ್ನು ಸೆಳೆಯುತ್ತದೆ. ಆಣೆಕಟ್ಟು ನಿರ್ಮಾಣ ಹಂತದ ಹಲವಾರು ಭಾವ ಚಿತ್ರಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದ್ದು ಅವು ಎಲ್ಲರ ಕುತೂಹಲವನ್ನು ತಣಿಸುವಂತಿವೆ.