ಕಾಕಿನಾಡಿನಿಂದ 45 ಕಿಲೋಮೀಟರು ದೂರದಲ್ಲಿರುವ ದ್ರಾಕ್ಷಾರಾಮಂ ದೇವಾಲಯದ ಬಳಿ ಇರುವ ಕೋಟಿಲಿಂಗೇಶ್ವರ ದೇವಸ್ಥಾನ ಶಿವಭಕ್ತರ ನೆಚ್ಚಿನ ತಾಣವಾಗಿದೆ. ಹತ್ತನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಯಿತು. ದೇವಾಲಯಕ್ಕೆ ಬರುವ ಪ್ರವಾಸಿಗರು, ಭಕ್ತರನ್ನು ಈ ದೇವಾಲಯ ಸೆಳೆಯುತ್ತದೆ. ಈ ದೇವಾಲಯದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಪೂಜಿಸಿದರೆ ಪಾಪವೆಲ್ಲಾ ಕಳೆದು ಹೊಸ ಉತ್ಸಾಹ ಬರುತ್ತದೆ ಎಂಬ ನಂಬಿಕೆ ಭಕ್ತರ ಮನಸ್ಸಿನಲ್ಲಿದೆ. ಇಂದ್ರನಿಂದ ಶಾಪ ಪಡೆದ ಗೌತಮ ಶಿವಲಿಂಗವನ್ನು ಸ್ಥಾಪಿಸಿ ಒಂದು ಮಿಲಿಯನ್ ಬಿಂದಿಗೆಗಳ ಅಭಿಷೇಕ ಮಾಡಿ ಶಾಪ ವಿಮೋಚನೆ ಮಾಡಿಕೊಂಡ ಎಂಬ ಪ್ರತೀತಿ ಈ ಸ್ಥಳಪುರಾಣದಲ್ಲಿದೆ.