ಇಸ್ಕಾನ್ ದೇವಾಲಯ ರಾಜಮಂಡ್ರಿಯ ಮನರಂಜನೆ ಮತ್ತು ಆರಾಧನೆಯ ಜನಪ್ರಿಯ ತಾಣವಾಗಿದೆ. ಇದನ್ನು ಗೌತಮಿ ಘಾಟ್ ಎಂದೂ ಕರೆಯಲಾಗುತ್ತದೆ. ಎರಡು ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ಈ ದೇವಾಲಯ ಹಬ್ಬಿಕೊಂಡಿದ್ದು, ಬೆಂಗಳೂರು ಇಸ್ಕಾನ್ ದೇವಾಲಯದ ಬಳಿಕ ಎರಡನೆ ದೊಡ್ಡ ದೇವಾಲಯ ಎಂದು ಇದನ್ನು ಬಣ್ಣಿಸಲಾಗುತ್ತದೆ. ಭಗವಾನ್ ಶ್ರೀ ಚೈತನ್ಯ ಮತ್ತ ರಮಾನಂದ ಅವರ ಪರಿಕಲ್ಪನೆಯಲ್ಲಿ ಇಸ್ಕಾನ್ ದೇವಾಲಯವು ರೂಪು ಪಡೆದಿದೆ. ವಾಡಿಕೆಯಲ್ಲಿ ಈ ದೇವಾಲಯವನ್ನು ರಮಾನಂದ ರಾಯ ಗೌಡಿಯಾ ಮಠ ಎಂತಲೂ ಕರೆಯಲಾಗುತ್ತದೆ. ಸುಮಾರು 500 ವರ್ಷಗಳ ಹಿಂದೆ ಶ್ರೀ ಚೈತನ್ಯರನ್ನು ಕೃಷ್ಣ ಅವತಾರವೆಂದೇ ಪೂಜಿಸಲಾಗುತ್ತಿತ್ತು. ಆ ನೆನಪಿನಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.