ಶ್ರೀರಾಮ ದೇವರಿಗೆ ಸಮರ್ಪಿಸಲಾಗಿರುವ ಈ ಧಾರ್ಮಿಕ ಕೇಂದ್ರವು ರಾಯಪುರ್ ನ ದಕ್ಷಿಣ ಭಾಗದಲ್ಲಿದೆ. 17ನೇ ಶತಮಾನದಲ್ಲಿ ಜೈತ್ ಸಿಂಗ್ ಅವರಿಂದ ನಿರ್ಮಿಸಲ್ಪಟ್ಟಿರುವ ಧಾರ್ಮಿಕ ಕೇಂದ್ರವು ಪ್ರದೇಶದ ಪ್ರಮುಖ ಆಕರ್ಷಣೆ. ಮಹಾರಾಜಬಂಧ್ ನದಿಯ ದಡದಲ್ಲಿರುವ ಧಾರ್ಮಿಕ ಕೇಂದ್ರದ ಸಮೀಪದಲ್ಲೇ ಮಂದಿರವೂ ಇದೆ.
ಧಾರ್ಮಿಕ ಕೇಂದ್ರದ ಹೆಸರಿನ ಬಗ್ಗೆ ಕುತೂಹಲಕಾರಿ ಕಥೆಯಿದೆ. ಕೇವಲ ಹಾಲು(ಹಿಂದಿಯಲ್ಲಿ ದೂಧ್) ಮಾತ್ರ ಆಹಾರವಾಗಿ ಸೇವಿಸುತ್ತಿದ್ದ ಸ್ವಾಮಿ ಬಾಲಭದ್ರ ದಾಸ್ ಅವರ ಹೆಸರನ್ನು ಈ ಧಾರ್ಮಿಕ ಕೇಂದ್ರಕ್ಕೆ ಇಡಲಾಗಿದೆ.
ಮಂದಿರದಲ್ಲಿರುವ ಆಕರ್ಷಕ ಭಿತ್ತಿಚಿತ್ರಗಳು ಪ್ರವಾಸಿಗರನ್ನು ಸೆಳೆಯುತ್ತದೆ. ಛತ್ತೀಸ್ ಗಢ್ ರಾಜ್ಯಕ್ಕೆ ಭೇಟಿ ನೀಡಿದರೆ ರಾಯಪುರ್ ನಲ್ಲಿರುವ ಧಾರ್ಮಿಕ ಕೇಂದ್ರ ಮತ್ತು ಮಂದಿರಕ್ಕೆ ಭೇಟಿ ನೀಡಲು ಮರೆಯದಿರಿ.