ಉತ್ತರ ಪ್ರದೇಶದ ರಾಯ್ ಬರೇಲಿಯು ಒಂದು ಜಿಲ್ಲಾ ಕೇಂದ್ರ ಪ್ರದೇಶವಾಗಿದೆ. ಈ ಜಿಲ್ಲೆಯನ್ನು ಬ್ರಿಟಿಷರಿಂದ 1858 ರಲ್ಲಿ ರೂಪಿಸಲಾಯಿತು. ಜಿಲ್ಲೆಯು ಸಮಸಪುರ ಪಕ್ಷಿಧಾಮದ ಮತ್ತು ಇಂದಿರಾ ಗಾಂಧಿ ಸ್ಮಾರಕ ಬಟಾನಿಕಲ್ ಗಾರ್ಡನ್ ಸೇರಿದಂತೆ ಅನೇಕ ಆಕರ್ಷಣೀಯ ಸ್ಥಳಗಳನ್ನು ಹೊಂದಿದೆ. ವಾಸ್ತವವಾಗಿ, ರಾಯ್ ಬರೇಲಿ ನಿಕಟವಾಗಿ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದೆ ಮತ್ತು ಇತ್ತೀಚಿನ ತನಕ ಅಂದರೆ 2012 ರವರೆಗೆ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಇದು ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಈ ಕ್ಷೇತ್ರದಲ್ಲಿ ಸೋಲನ್ನನುಭವಿಸಿತ್ತು!
ರಾಯ್ ಬರೇಲಿ ಸ್ಥಳದಲ್ಲಿನ ಹಾಗೂ ಸುತ್ತಲಿನ ಪ್ರವಾಸಿ ಸ್ಥಳಗಳು
ರಾಯ್ ಬರೇಲಿಯಲ್ಲಿ ನೋಡುವಂತಹ ಹಲವಾರು ಸ್ಥಳಗಳಿವೆ. ಈ ಮೇಲೆ ಹೇಳಿರುವಂತೆ ಒಂದು ಅತ್ಯಂತ ಸುಂದರವಾದ ಸ್ಥಳ ಸಮಸ ಪುರ ಪಕ್ಷಿಧಾಮ. ಇಲ್ಲಿ ಸುಮಾರು 250 ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳನ್ನು ಹಾಗೂ ಇತರೆ ಪ್ರಾಣಿಗಳನ್ನು ಕಾಣಬಹುದು. ಇಂದಿರಾ ಗಾಂಧಿ ಸ್ಮಾರಕ ಸಸ್ಯೋದ್ಯಾನ ಔಷಧಿಯ ಸಸ್ಯಗಳು ಮತ್ತು ಅಲಂಕಾರಿಕ ಸಸ್ಯಗಳನ್ನುಹೊಂದಿರುವುದು ಮಾತ್ರವಲ್ಲದೆ ಸಂಶೋಧನಾ ಸಂಸ್ಥೆಯೂ ಕೂಡ ಆಗಿದೆ.
ಐತಿಹಾಸಿಕ ಸ್ಥಳವಾದ ದಲಮೂ ಸಹ ಅತ್ಯಂತ ಆಕರ್ಷಣೀಯ ಸ್ಥಳವಾಗಿದ್ದು, ರಾಜ ದಲ್ ನ ಕೋಟೆ, ಬಾರಾ ಮಠ ಮತ್ತು ಮಹೇಶ್ ಗಿರಿ ಮಠ ಸೇರಿದಂತೆ ಇನ್ನೂ ಅನೇಕ ಆಕರ್ಷಣೆಗಳನ್ನು ಹೊಂದಿದೆ. ರಾಯ್ ಬರೇಲಿಯಲ್ಲಿ, ಸಾಯಿ ನದಿ ಮೇಲಿರುವ ಬೆಹ್ತಾ ಸೇತುವೆ ಮತ್ತು ಜೈಸ್, ರಾಯ್ ಬರೇಲಿ ಜಿಲ್ಲೆಯ ಅತ್ಯಂತ ಪ್ರಾಚೀನ ನಗರಗಳಾಗಿವೆ.
ರಾಯ್ ಬರೇಲಿ ತಲುಪುವುದು ಹೇಗೆ?
ರಾಯ್ ಬರೇಲಿಯನ್ನು ವಿಮಾನ ಮಾರ್ಗ, ರಸ್ತೆ ಮತ್ತು ರೈಲ್ವೆ ಮಾರ್ಗಗಳ ಮೂಲಕ ತಲುಪಬಹುದು.
ರಾಯ್ ಬರೇಲಿ ಭೇಟಿಗೆ ಸೂಕ್ತವಾದ ಸಮಯ
ರಾಯ್ ಬರೇಲಿ ಸ್ಥಳವನ್ನು ವೀಕ್ಷಿಸಲು ಆಹ್ಲಾದಕರ ಮಾತಾವರಣವಿರುವ ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳಿನ ಅವಧಿಯಲ್ಲಿ ಭೇಟಿ ನೀಡಬಹುದು.