ಪ್ರಶಾಂತಿ ನಿಲಯ ಸತ್ಯ ಸಾಯಿ ಬಾಬಾರ ಪವಿತ್ರ ವಾಸಸ್ಥಾನ. ಪ್ರಶಾಂತಿ ನಿಲಯದ ನಿಜ ಅರ್ಥವೆಂದರೆ ಶಾಂತಿಯ ನಿವಾಸ ಎಂದು. ಹೀಗಾಗಿಯೇ ಪ್ರತಿವರ್ಷ ಸಾವಿರಾರು ಭಕ್ತರು ಈ ಆಶ್ರಮಕ್ಕೆ ಮನಸ್ಸು ಮತ್ತು ಆತ್ಮದ ಶಾಂತಿಯನ್ನು ಅರಸಿ ಬರುತ್ತಾರೆ. ಆಶ್ರಮವು ಉದ್ಘಾಟನೆಯಾಗಿದ್ದು 1950 ರಲ್ಲಿ.
ಆಶ್ರಮವು ಎಲ್ಲ ರೀತಿಯ ಆಧುನಿಕ ವ್ಯವಸ್ಥೆಗಳನ್ನೂ ಹೊಂದಿದ್ದು ಶಿಕ್ಷಣ ಸಂಸ್ಥೆಗಳು ಮತ್ತು ಸ್ಟೇಡಿಯಂ ಮುಂತಾದವುಗಳನ್ನೂ ಹೊಂದಿದೆ. ಇಲ್ಲಿಗೆ ಭೇಟಿ ನೀಡುವವರು ಆಶ್ರಮದ ರೀತಿ ರಿವಾಜು ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಶ್ರಮದಲ್ಲಿ ಸಭಾಗೃಹವಿದ್ದು ಬಾಬಾ ತಮ್ಮ ಭಕ್ತರಿಗಿಲ್ಲಿ ದರ್ಶನ ನೀಡುತ್ತಿದ್ದರು. ಆಶ್ರಮವು ಸತ್ಯ ಸಾಯಿ ಸೇವಾ ಸಂಸ್ಥೆ ಮತ್ತು ಶ್ರೀ ಸತ್ಯ ಸಾಯಿ ಕೇಂದ್ರೀಯ ಟ್ರಸ್ಟ್ ನ ಆಡಳಿತದಲ್ಲಿದೆ.