ಪ್ರಶಾಂತಿ ನಿಲಯವನ್ನು ಸ್ಥಾಪಿಸಿದ ವರ್ಷದಲ್ಲಿಯೇ ಅಂದರೆ 1949 ರಲ್ಲಿಯೇ ಗಣೇಶ ದೇವಸ್ಥಾನವನ್ನೂ ನಿರ್ಮಿಸಲಾಯಿತು. ಮುಖ್ಯ ದೇವಸ್ಥಾನದ ಮುಂಬಾಗಿಲಿನಲ್ಲಿಯೇ ಗಣೇಶ ದೇವಾಲಯವಿದ್ದು ಎಲ್ಲ ದೇವರಿಗೂ ಪ್ರಾರ್ಥನೆ ಸಲ್ಲಿಸುವ ಮುಂಚೆ ಗಣಪತಿಗೆ ವಂದಿಸಬೇಕೆಂದು ನಂಬಿಕೆಯಿದೆ. ಗಣೇಶ ಶಿವನ ಸೇನೆಯ ಮುಖ್ಯಸ್ಥ ಹಾಗೂ ಗಣೇಶನನ್ನು ಪೂಜಿಸುವುದರಿಂದ ಒಬ್ಬರ ದಾರಿಯಲ್ಲಿ ಎದುರಾಗುವ ಎಲ್ಲ ವಿಘ್ನಗಳೂ ದೂರಾಗುತ್ತವೆ ಎಂಬ ನಂಬಿಕೆಯಿದೆ.