ಬೇಡಿ ಹನುಮಾನ್ ದೇವಾಲಯ ಹೆಸರೇ ಹೇಳುವಂತೆ ಹನುಮಾನ್ ಮಂದಿರ ಸರಪಳಿಯ ಮಂದಿರ ಮತ್ತು ಪುರಿಯ ಚಕ್ರನಾರಾಯಣ ಮಂದಿರದ ಪಶ್ಚಿಮದ ಕಡೆಗೆ ಸಮುದ್ರದ ಸಣ್ಣ ಮಂದಿರವಾಗಿದೆ. ಇದನ್ನು ದರಿಯಾ ಮಹಾವೀರ್ ಮಂದಿರವೆಂದೂ ಕರೆಯಲಾಗುತ್ತದೆ. ದರಿಯಾವೆಂದರೆ ಸಮುದ್ರ ಮತ್ತು ಮಹಾವೀರನೆಂದರೆ ಹನುಮಾನ್ ದೇವರಿಗಿರುವ ಮತ್ತೊಂದು ಹೆಸರು. ಪುರಿಯನ್ನು ಸಮುದ್ರದಿಂದ ರಕ್ಷಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಹನುಮಾನ್, ಜಗನ್ನಾಥನಿಗೆ ಹೇಳದೆ ಅಯೋಧ್ಯೆಗೆ ತೆರಳುತ್ತಾನೆ. ಆಗ ಸಮುದ್ರದ ನೀರು ನಗರಕ್ಕೆ ನುಗ್ಗಿ ದೇವಸ್ಥಾನಕ್ಕೆ ಹಾನಿಯಾಗುತ್ತದೆ.
ಭವಿಷ್ಯದ ಭದ್ರತೆಯಿಂದ ಜಗನ್ನಾಥ ದೇವರು ದಿನರಾತ್ರಿ ಜಾಗರೂಕನಾಗಿರುವಂತೆ ಹನುಮಾನ್ ಗೆ ಸಂಕೋಲೆಯನ್ನು ಹಾಕಿ ಅಧಿಪಥ್ಯ ಸ್ಥಾಪಿಸಿದರು. ದೇವಸ್ಥಾನದ ಹೊರಗಿನ ಗೋಡೆಗಳಲ್ಲಿ ವಿವಿಧ ದೇವ-ದೇವತೆಗಳ ಚಿತ್ರವಿದೆ. ಪಶ್ಚಿಮದ ಗೋಡೆಯಲ್ಲಿ ಅಂಜನಾ ತನ್ನ ತೊಡೆಯ ಮೇಲೆ ಮಗುವನ್ನು ಮಲಗಿಸುವ ಚಿತ್ರವಿದೆ. ಉತ್ತರದ ಗೋಡೆಯಲ್ಲಿ ಅಲಂಕರಿಸಿದ ಮೆಟ್ಟಿಲುಗಳ ಮೇಲೆ ಮಹಿಳಾ ಭಕ್ತೆಯರು ಮತ್ತು ದಕ್ಷಿಣದ ಗೋಡೆಯಲ್ಲಿ ಗಣಪತಿ ದೇವರ ಚಿತ್ರ ಪುರಿಯ ಸಾಂಸ್ಕೃತಿಕ ಭವ್ಯತೆಗೆ ಸಾಕ್ಷಿಯಾಗಿದೆ.