ಪುರಿಯಿಂದ 25 ಕಿ.ಮೀ. ದೂರದಲ್ಲಿರುವ ಬ್ರಹ್ಮಗಿರಿಯಲ್ಲಿರುವ ಅಲರ್ನಾಥ ಮಂದಿ ಕೃಷ್ಣ ದೇವರ ಭಕ್ತರಿಗೆ ಜನಪ್ರಿಯ ಯಾತ್ರಾಸ್ಥಳವಾಗಿದೆ. ಸತ್ಯಯುಗದಲ್ಲಿ ಬ್ರಹ್ಮ ದೇವರು ಬೆಟ್ಟದ ಮೇಲೆ ವಿಷ್ಣುವನ್ನು ಆರಾಧಿಸುತ್ತಿದ್ದಾಗ ಪ್ರತ್ಯಕ್ಷರಾದ ದೇವರು, ಒಂದೇ ಕಪ್ಪು ಕಲ್ಲಿನಲ್ಲಿ ಶಂಖ, ಚಕ್ರ, ಗಧೆ ಮತ್ತು ಕಮಲವನ್ನು ಹಿಡಿದುಕೊಂಡ ನಾಲ್ಕು ಕೈಗಳುಳ್ಳ ವಿಷ್ಣುವಿನ ಮೂರ್ತಿಯನ್ನು ನಿರ್ಮಿಸಲು ಸೂಚಿಸಿದರೆಂಬ ನಂಬಿಕೆಯಿದೆ.
ಅಲರ್ನಾಥ ಮಂದಿರದಲ್ಲಿ ವಿಷ್ಣು ದೇವರನ್ನು ಅಲರ್ನಾಥನೆಂದು ಪೂಜಿಸಲಾಗುತ್ತದೆ. ವಿಷ್ಣುವಿನ ವಾಹನ ಗರುಡ ಮೂರ್ತಿಯ ಕಾಲಿನ ಬಳಿ ಮಂಡಿಯೂರಿ ಕೈಮುಗಿದು ನಮಸ್ಕರಿಸುವುದನ್ನು ಕಾಣಬಹುದು. ಕೃಷ್ಣ ದೇವರ ರಾಣಿಯರಾದ ರುಕ್ಮಿಣಿ ಮತ್ತು ಸತ್ಯಭಾವ, ಚೈತನ್ಯ ದೇವರ ಮೂರ್ತಿಗಳನ್ನು ಮಂದಿರದಲ್ಲಿದೆ. ಚೈತನ್ಯ ದೇವರ ಶರೀರದ ಅಸ್ತಿತ್ವವನ್ನು ಸಾರುವ ಕಲ್ಲು ಚಪ್ಪಡಿಯೊಂದು ದೇವಸ್ಥಾನದಲ್ಲಿದೆ ಮತ್ತು ಇದನ್ನು ಅಲರ್ನಾಥ ದೇವರ ಮುಂದಿಟ್ಟಾಗ ಚೈತನ್ಯ ದೇವರ ಕೆಳಗಡೆಯಿದ್ದ ಕಲ್ಲು ಕರಗಿತೆಂದು ನಂಬಲಾಗಿದೆ.