ಪುಲ್ವಾಮಾ ಜಿಲ್ಲೆಯ ಜವಾಬ್ರರಿ ಹಳ್ಳಿಯಲ್ಲಿರುವ ಧಾರ್ಮಿಕ ಮತ್ತು ಐತಿಹಾಸಿಕ ತಾಣ ಅವಂತೀಶ್ವರ ದೇವಸ್ಥಾನ. ಈ ದೇವಸ್ಥಾನವು ವಿಷ್ಣುವಿಗೆ ಅರ್ಪಿತವಾಗಿದೆ. ರಾಜ ಅವಂತಿವರ್ಮ ಈ ದೇವಸ್ಥಾನವನ್ನು 9ನೇ ಶತಮಾನದಲ್ಲಿ ಕಟ್ಟಿಸಿದ್ದ. ಈತ ಉತ್ಪಲರ ಮೊದಲ ರಾಜ. ಈತ ಈ ಪ್ರದೇಶವನ್ನು ತನ್ನ ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ.
ಸದ್ಯ ಈ ದೇವಸ್ಥಾನವು ಪಳೆಯುಳಿಕೆಯಾಗಿದೆ. ದೇವಸ್ಥಾನದ ರಚನೆಗೆ ಮರಳುಗಲ್ಲುಗಳನ್ನು ಬಳಸಲಾಗಿತ್ತು. ಈ ದೇವಸ್ಥಾನ ಹಿಂದೊಮ್ಮೆ ಭೂಗರ್ಭದಲ್ಲಿ ಸೇರಿಹೋಗಿತ್ತು. ನಂತರ ಬ್ರಿಟೀಷರ ಆಳ್ವಿಕೆಯಲ್ಲಿ 18ನೇ ಶತಮಾನದಲ್ಲಿ ಇದನ್ನು ಉತ್ಖನನ ಮಾಡಲಾಯಿತು. ಉತ್ಖನನದ ಸಂದರ್ಭದಲ್ಲಿ ಅವಂತೀಶ್ವರ ದೇಗುಲದ ಕೆಲವು ಕಲಾಕೃತಿಗಳನ್ನು ಬ್ರಿಟೀಷರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಉಳಿದ ಕೆಲವು ಕಲಾಕೃತಿಗಳನ್ನು ಪ್ರವಾಸಿಗರು ಶ್ರೀನಗರದಲ್ಲಿರುವ ಶ್ರೀ ಪ್ರತಾಪ್ ಸಿಂಗ್ ಮ್ಯೂಸಿಯಂನಲ್ಲಿ ನೋಡಬಹುದು. ಇನ್ನುಳಿದಂತೆ ದೇವಸ್ಥಾನವು ಪಳೆಯುಳಿಕೆಯಂತಾಗಿದೆ. ಆದರೂ ಇಲ್ಲಿ ದೇವಾನುದೇವತೆಗಳ ವಿವಿಧ ರೂಪಗಳನ್ನು ಇಲ್ಲಿ ನೋಡಬಹುದು ಗತಕಾಲದ ವೈಭವತೆಯ ಅಣುಕು ಅನುಭವವನ್ನು ಖಂಡಿತವಾಗಿಯೂ ಸವಿಯಬಹುದು.