ಬೇಲಾ ಪ್ರತಾಪಘಡ್, ಪ್ರತಾಪಘಡ್ ನ ಕೇಂದ್ರ ಕಾರ್ಯಸ್ಥಾನವಾಗಿದೆ. ಸಾಯಿ ನದಿಯ ತೀರದಲ್ಲಿರುವ ಬೇಲಾ ಭವಾನಿ ದೇವಸ್ಥಾನದ ಕಾರಣ ಈ ಊರು ಬೇಲಾ ಪ್ರತಾಪಘಡ್ ಎಂದು ನಾಮಾಂಕಿತವಾಗಿದೆ. ಭಗವಾನ್ ಶ್ರೀ ರಾಮಚಂದ್ರನು ಮುಸ್ಸಂಜೆಯ ವೇಳೆ ಈ ನದಿಯನ್ನು ದಾಟಿದ್ದು, ಅದಕ್ಕೂ ಮೊದಲು ಈ ಸ್ಥಳದಲ್ಲಿ ನಿಂತು ದೇವಿಗೆ ತನ್ನ ಗೌರವಗಳನ್ನು ಅರ್ಪಿಸಿದ್ದಾನೆ ಎಂದು ಐತಿಹ್ಯವಿದೆ. ಕಾಲಾಂತರದಲ್ಲಿ, ಬೇಲಾ ಭವಾನಿ ದೇವಾಲಯವು, ಶ್ರೀ ರಾಮಚಂದ್ರನು ಪೂಜಿಸಿದ ಸ್ಥಳದಲ್ಲಿ ಸ್ಥಾಪಿಸಲ್ಪಟ್ಟಿತು.
ಈ ದೇವಸ್ಥಾನವು ಸುಲ್ತಾನ್ ಪುರ್ ರಸ್ತೆಯಲ್ಲಿ, ಬೇಲ ಪ್ರತಾಪಘಡ್ ರೈಲ್ವೆ ನಿಲ್ದಾಣದಿಂದ ಕೇವಲ 3 ಕಿ. ಮೀ. ದೂರದಲ್ಲಿದೆ. ಅಟೋ ರಿಕ್ಷಾದ ಮೂಲಕ ನೀವು ನಿಲ್ದಾಣದಿಂದ ದೇವಳವನ್ನು ತಲುಪಬಹುದು. ದೇವಸ್ಥಾನವನ್ತೂ ವರ್ಷವಿಡೀ ಭಕ್ತಾದಿಗಳನ್ನು ಆಕರ್ಷಿಸುತ್ತದೆ, ಅದರಲ್ಲೂ ನವರಾತ್ರಿಯ ಕಾಲದಲ್ಲಂತೂ ದೇವಳವು ಜನಜಂಗುಳಿಯಿಂದ ಕೂಡಿರುತ್ತದೆ.