ಜಿಯಾರತ್ ಛೋಟೆ ಶಾ ಸಾಹೀಬ್ವು ಮುಸ್ಲಿಂ ಸಂತರಾದ ಸಖಿ ಪೀರ್ ಛೋಟಾ ಶಾ ಅವರಿಗೆ ಮೀಸಲಾದ ಮಂದಿರವಾಗಿದೆ. ಇದು ಸಖಿ ಮದೀನ್ ಹಳ್ಳಿಯಲ್ಲಿದೆ. ಮೆಂದಾರ್ ಪಟ್ಟಣದಿಂದ ಇದು ಐದು ಕಿ.ಮೀ. ದೂರದಲ್ಲಿದೆ. ಈ ಮಂದಿರವು ಜಿಲ್ಲೆಯ ಅತ್ಯಂತ ಪವಿತ್ರ ಹಾಗೂ ಗೌರವಯುತವಾದ ಪವಿತ್ರ ನೆಲೆಯಾಗಿದೆ. ಇಲ್ಲಿ ಹಿಂದು ಹಾಗೂ ಮುಸ್ಲಿಮರು ಒಟ್ಟಾಗಿ ಪ್ರತಿ ವರ್ಷ ಪ್ರಾರ್ಥನೆ ಸಲ್ಲಿಸುತ್ತಾರೆ. ಸಂತರ ನೆನಪಿನಾರ್ಥವಾಗಿ ಇಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.