ಪಂಚವಟಿ ಪಿಲಾನಿಯ ಪ್ರಖ್ಯಾತ ಸ್ಥಳ. ಇದನ್ನು ಪಿಲಾನಿಯ ಬಿರ್ಲಾ ಟ್ರಸ್ಟ್ ಸ್ಥಾಪಿಸಿ, ನಿರ್ವಹಿಸುತ್ತಿದೆ. ರಾಮಾಯಣದ ಪ್ರಕಾರ, ರಾಮನು ವನವಾಸದಲ್ಲಿದ್ದಾಗ ವಾಸಿಸುತ್ತಿದ್ದ ಸ್ಥಳವೇ ಪಂಚವಟಿ. ಪಿಲಾನಿಯ ಪಂಚವಟಿಯು ರಾಮನ ಜೀವನದ ವಿವಿಧ ಭಾಗಗಳನ್ನು ಹಿಡಿದಿಡುವಲ್ಲಿ ಪರಿಣಾಮಕಾರಿಯಾದ ಪ್ರಯತ್ನವನ್ನು ಮಾಡಿದೆ. ಇದರ ಸುತ್ತುಮುತ್ತಲಿರುವ ಹಸಿರಿನ ವಾತಾವರಣವು ದಟ್ಟ ಮರಗಳು, ಬೇಲಿಗಳು ಮತ್ತು ಹುಲ್ಲು ಹಾಸಿಗೆಗಳನ್ನು ಒಳಗೊಂಡಿದ್ದು, ಒಂದು ನೈಜವಾದ ಕಾಡಿನ ಭಾವನೆಯನ್ನು ಮೂಡಿಸುತ್ತದೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಲೋ ವಿರಾ ಸಸ್ಯಗಳು ಮತ್ತು ಮಣ್ಣಿನ ರಹದಾರಿಗಳನ್ನು ಕಾಣಬಹುದು.
ಈ ಹಸಿರಿನ ಮಧ್ಯೆ ರಾಮ, ಲಕ್ಷ್ಮಣ, ಸೀತಾ, ಹಣುಮಂತ ಮತ್ತು ಹಲವು ರಾಮಾಯಣದ ಇನ್ನಿತರ ಪಾತ್ರಧಾರಿಗಳ ಪ್ರತಿಮೆಗಳನ್ನು ಇರಿಸಲಾಗಿದೆ. ಇವು ರಾಮಾಯಣದ ಹಲವು ತುಣುಕುಗಳನ್ನು ಪ್ರದರ್ಶಿಸುತ್ತವೆ. ರಾಮಾಯಣದ ನಿಜವಾದ ಪಂಚವಟಿ ಕಾಡಿನ ಅನುಭವವನ್ನು ಈ ಸ್ಥಳವು ನಿರ್ಮಿಸುತ್ತದೆ. ಪಿಲಾನಿಗೆ ಬರುವ ಪ್ರವಾಸಿಗರು ಇದನ್ನೊಮ್ಮೆ ಭೇಟಿ ನೀಡಲೇ ಬೇಕು.