ಮಹಾರಾಣಿ ತ್ರಿಲೋಕ್ಯಾಮಹಾದೇವಿ ಕ್ರಿ.ಶ.740ರಲ್ಲಿ ತನ್ನ ಪತಿ ಎರಡನೇ ವಿಕ್ರಮಾಧಿತ್ಯ ಪಲ್ಲವರ ರಾಜರ ವಿರುದ್ಧ ಯುದ್ಧದಲ್ಲಿ ಗೆದ್ದ ನೆನಪಿಗಾಗಿ ಈ ದೇವಾಲಯ ನಿರ್ಮಾಣ ಮಾಡಿದರು.ಇದು ಕರ್ನಾಟಕ ರಾಜ್ಯದ ಅತೀ ಪುರಾತನ ದೇವಾಲಯವಾಗಿದ್ದು ಸುಮಾರು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.ಕಂಚಿಯಲ್ಲಿರು ಕೈಲಾಸನಾಥ ದೇವಾಲಯದ ಮಾದರಿಯನ್ನೇ ನೆನಪಿಸುವ ವಾಸ್ತುಶಿಲ್ಪವನ್ನು ಹೊಂದಿರುವ ವಿರೂಪಾಕ್ಷ ದೇವಾಲಯ ಅತ್ಯಂತ ಸುಂದರ ಹಾಗೂ ಆಕರ್ಷಣೀಯವಾಗಿದೆ.
ಈ ದೇವಾಲಯಕ್ಕೆ ಭೇಟಿ ಮಾಡುವ ಪ್ರವಾಸಿಗರು ಹಿಂದೂ ದೇವತೆಗಳಾದ ಉಗ್ರನರಸಿಂಹ, ನಟರಾಜ, ರಾವಣಾನುಗ್ರಹ ಮತ್ತು ಲಿಂಗೋದ್ಭವ ಇವುಗಳನ್ನು ಕಾಣಬಹುದು. ಒಳಭಾಗದ ಅಲಂಕಾರಕ್ಕೆ ಕೆತ್ತನೆ ಕೆಲಸಗಳು, ರೇಖಾ ಚಿತ್ರಗಳನ್ನು ಬಳಸಲಾಗಿದೆ. ರಾಮಾಯಣ, ಭಗವದ್ಗೀತೆ, ಮಹಾಭಾರತ ಹಾಗೂ ಗೀರ್ತಾರ್ಜನೆಯಲ್ಲಿನ ಪ್ರಮುಖ ಘಟನೆಗಳನ್ನು ಇಲ್ಲಿನ ಸಭಾ-ಮಂಟಪದ ಕಂಬಗಳ ಮೇಲೆ ಅಂದವಾಗಿ ಚಿತ್ರಿಸಲಾಗಿದೆ. ದೇವಾಲಯದ ಇತರ ಭಾಗಗಳಲ್ಲೂ ಅನೇಕ ವಿಧವಾದ ವಿಶೇಷ ವಿನ್ಯಾಸಗಳಿಂದ ಅಲಂಕೃತಗೊಳಿಸಲಾಗಿದೆ.
ವಿರೂಪಾಕ್ಷ ದೇವಾಲಯದ ಪೂರ್ವ ಭಾಗದಲ್ಲಿ ಭಕ್ತರಿಗಾಗಿ ಇದರ ನಾಲ್ಕು ದಿಕ್ಕಿನಲ್ಲೂ ತೆರೆಯಲ್ಪಟ್ಟಿರುವ ನಂದಿ-ಮಂಟಪವಿದೆ. ಶಿವನ ವಾಹನವಾದ ನಂದಿಯ ದೊಡ್ಡ ಚಿತ್ರವು ನಂದಿ-ಮಂಟಪದ ಒಳಗಿರುವ ಎತ್ತರದ ವೇದಿಕೆಯಲ್ಲಿದೆ. ರಾಜ ಎರಡನೇ ವಿಕ್ರಮಾದಿತ್ಯನು ಹೇಗೆ ಕಾಂಚಿಪುರವನ್ನು ವಶಪಡಿಸಿಕೊಂಡನು ಎಂಬ ಚಿತ್ರಣವನ್ನು ಪೂರ್ವದ ಬಾಗಿಲಿನ ಸಮೀಪದಲ್ಲಿ ಚಿತ್ರೀಕರಿಸಲಾಗಿದೆ. ಈ ದೇವಾಲಯವು ಅತ್ಯಂತ ಮಹತ್ವವನ್ನು ಹೊಂದಿರುವುದರಿಂದ ಪಟ್ಟದಕಲ್ಲಿಗೆ ಬರುವ ಎಲ್ಲಾ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬೇಕೆಂದು ಇತಿಹಾಸ ತಜ್ಞರು ಸಲಹೆ ನೀಡುತ್ತಾರೆ.